CrimeDistricts

ಮಲಗಿದ್ದವರ ಮೇಲೆ ಹರಿದ ಟಿಪ್ಪರ್‌; ಕಾರ್ಮಿಕ ದಾರುಣ ಸಾವು!

ಉಡುಪಿ; ಪೆಟ್ರೋಲ್‌ ಬಂಕ್‌ ಬಳಿ ವಾಹನವನ್ನು ನಿಲ್ಲಿಸಿ, ಅಲ್ಲಿಯೇ ವಿಶಾಲವಾದ ಸ್ಥಳದಲ್ಲಿ ಮಗಗಿದ್ದವರ ಮೇಲೆ ಟಿಪ್ಪರ್‌ ಒಂದು ಹರಿದಿದೆ. ಇದರಿಂದಾಗಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ. ಉಡುಪಿ ಜಿಲ್ಲೆ ಹೆಬ್ರಿ ಸಮೀಪದ ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ಈ ದುರ್ಘಟನೆ ನಡೆದಿದೆ.

 

ಶಿವರಾಜ್ (38) ಎಂಬಾತನೇ ಟಿಪ್ಪರ್ ಹರಿದು ಸಾವನ್ನಪ್ಪಿದ ಕಾರ್ಮಿಕನಾಗಿದ್ದಾನೆ. ಸಾಗರ ತಾಲೂಕಿನ ಕೊರ್ಲಿ ಕೊಪ್ಪದ ನಿವಾಸಿ ಶಿವರಾಜ್ ಹಾಗೂ ಮಹೇಂದ್ರ ಎಂಬವರು ಪೆಟ್ರೋಲ್ ಪಂಪ್ ಬಳಿ ತಮ್ಮ ವಾಹನವನ್ನು ನಿಲ್ಲಿಸಿದ್ದರು. ಅಲ್ಲಿಯೇ ಮಲಗಿದ್ದರು. ಈ ವೇಳೆ ಪೆಟ್ರೋಲ್‌ ಹಾಕಿಸಲು ಬಂದ ಟಿಪ್ಪರ್‌ ಅವರ ಮೇಲೆ ಹರಿದಿದೆ.

 

ಘಟನೆಯಲ್ಲಿ ಶಿವರಾಜ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮಹೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Share Post