CrimeDistricts

ನಕಲಿ ಪಿಸ್ತೂಲ್‌ ತೋರಿಸಿ 39 ಲಕ್ಷ ರೂಪಾಯಿ ದರೋಡೆ

ರಾಯಚೂರು; ಮನೆಯೊಂದಕ್ಕೆ ನುಗ್ಗಿರುವ ದರೋಡೆಕೋರರು ನಕಲಿ ಪಿಸ್ತೂಲ್‌ ತೋರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಸಿಂಧನೂರು ತಾಲ್ಲೂಕಿನ ಗಾಂಧಿನಗರದಲ್ಲಿ ನಡೆದಿದೆ. ಇಲ್ಲಿ ಶಿವ ದೇವಾಲಯದ ಅಧ್ಯಕ್ಷ ಎಂ.ಭಾಸ್ಕರ್‌ ರಾವ್ ಅವರ ಮನೆಯಲ್ಲಿ ಈ ದರೋಡೆ ನಡೆದಿದೆ.

ಮನೆಗೆ ನುಗ್ಗಿದ ದರೋಡೆಕೋರರು ನಕಲಿ ಪಿಸ್ತೂಲ್‌ ತೋರಿಸಿದ್ದಾರೆ. ಅನಂತರ ಭಾಸ್ಕರ್‌ ರಾವ್‌ ಹಾಗೂ ಅವರ ಪುತ್ರನ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಅನಂತರ 395 ಗ್ರಾಂ ತೂಕದ ಚಿನ್ನಾಭರಣ, 18 ಲಕ್ಷ ರೂಪಾಯಿ ನಗದು ಸೇರಿ ಒಟ್ಟು 38.85 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ. ಮಲಗಿದ್ದ ಅಜ್ಜಿಯ ಮೈಮೇಲಿದ್ದ ಒಡವೆಯನ್ನೂ ಬಿಟ್ಟಿಲ್ಲ.

ಮನೆಯಲ್ಲಿ ಎಲ್ಲರನ್ನೂ ದೋಚಿದ ಮೇಲೆ ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗುತ್ತೆ ಎಂಬ ಭಯದಿಂದ ಆತುರಾತುರವಾಗಿ ದರೋಡೆಕೋರರು ಪರಾರಿಯಾಗಿದ್ದು, ಅವಸರದಲ್ಲಿ ಪಿಸ್ತೂಲ್‌ ಹಾಗೂ ರಾಡ್‌ನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಪೊಲೀಸರು ಪರಿಶೀಲಿಸಿದಾಗ ದರೋಡೆಕೋರರು ತೋರಿಸಿದ ಪಿಸ್ತೂಲ್‌ ನಕಲಿಯದ್ದು ಎಂದು ತಿಳಿದುಬಂದಿದೆ.

Share Post