Districts

ರಾಜಕೀಯದಲ್ಲಿರುವೆ..ಆದರೆ ಚುನಾವಣಾ ರಾಜಕೀಯದಲ್ಲಿ ಇರಲ್ಲ..!ಸಿದ್ದರಾಮಯ್ಯ ಮಾತಿನ ಅರ್ಥವೇನು..?

ಮೈಸೂರು: ಮುಂಬರುವ ವರ್ಷದ ವಿಧಾನಸಭಾ ಚುನಾವಣಾ ವಿಚಾರವಾಗಿ ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಚುನಾವಣಾ ರಾಜಕೀಯದಲ್ಲಿ ಮುಂಬರುವ ಚುನಾವಣೆಯೇ ಕೊನೆ ಎಂಬ ಮಾತನ್ನು ಹೇಳಿದ್ದಾರೆ. ಅಂದರೆ ಈ ಚುನಾವಣೆ ಬಳಿಕ ನಿವೃತ್ತಿಯಾಗುವ ಯೋಚನೆ ಮಾಡಿದ್ದಾರೆಯೇ ಎಂಬ ಆಲೋಚನೆ ಮನೆಮಾಡಿದೆ.   ರಾಜಕೀಯದಲ್ಲಿರುತ್ತೇನೆ, ಆದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಮಾತ್ರ ಮುಂಬರುವ ಚುನಾವಣೆಯೇ ಕೊನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ತೀರ್ಮಾನ ಮಾಡಿರುವ ಬಗ್ಗೆ ಮಾತನಾಡಿದ ಅವರು. ನನಗೆ ಎಲ್ಲಾ ಕ್ಷೇತ್ರಗಳಲ್ಲು ಪ್ರಯಾರಿಟಿಯೇ ಎಲ್ಲಾ ಜನರು ನನ್ನನ್ನು ಸ್ವಾಗತ ಮಾಡ್ತಾರೆ. ಆದರೆ ಈ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ. ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ಈ ಬಗ್ಗೆ ಆಮೇಲೆ ಯೋಚನೆ ಮಾಡಿದ್ರಾಯಿತು ಎಂಬ ಮಾತನ್ನು ಸಿದ್ದರಾಮಯ್ಯ ಹೇಳಿದ್ರು.

Share Post