CrimeDistricts

ಅಂಬಳೆ ಕೆರೆಗೆ ಉರುಳಿಬಿದ್ದ ಕಾರು; ಕಾರು ಚಾಲಕ ಸ್ಥಳದಲ್ಲೇ ಸಾವು!

ಚಿಕ್ಕಮಗಳೂರು; ಚಿಕ್ಕಮಗಳೂರಿನ ಅಂಬಳೆ ಕೆರೆಗೆ ಕಾರೊಂದು ಉರುಳಿಬಿದ್ದು, ವ್ಯಕ್ತಿಯೋರ್ವ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.. ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿಬಿದ್ದಿದ್ದು, ಕಾರು ಓಡಿಸುತ್ತಿದ್ದ ದಿನೇಶ್‌ ಎಂಬಾತ ಸಾವನ್ನಪ್ಪಿದ್ದಾನೆ..

ಚಿಕ್ಕಮಗಳೂರಿನಲ್ಲಿ ಬಟ್ಟೆ ವ್ಯಾಪಾರಿಯಾಗಿರುವ ದಿನೇಶ್‌ ಅವರು ಸಂತೋಷ್‌ ಎಂಬಾತನ ಜೊತೆ ಕಾರಿನಲ್ಲಿ ಹೋಗುತ್ತಿದ್ದರು.. ದಿನೇಶ್‌ ಕಾರು ಓಡಿಸುತ್ತಿದ್ದರು.. ಅವರು ಅಂಬಳೆ ಗ್ರಾಮಕ್ಕೆ ಹೋಗಬೇಕಿತ್ತು.. ಗ್ರಾಮಕ್ಕೆ ಮುಂಚೆ ಅದೇ ಗ್ರಾಮದ ಕೆರೆಯ ಕಟ್ಟೆ ಮೇಲೆ ರಸ್ತೆ ಇದೆ.. ಆ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ, ಕಾರು ನಿಯಂತ್ರಣ ತಪ್ಪಿದೆ.. ಇದರಿಂದಾಗಿ ಕಾರು ನೀರಿಗೆ ಉರುಳಿದೆ..

ಕಾರು ನೀರಿಗೆ ಬಿದ್ದಾಗ ಡ್ರೈವಿಂಗ್‌ ಸೀಟ್‌ನಲ್ಲಿದ್ದ ದಿನೇಶ್‌ ಕಾರಿನಿಂದ ಹೊರಬರೋದಕ್ಕೆ ಸಾಗದೇ ಅಲ್ಲಿಯೇ ಸಾವನ್ನಪ್ಪಿದ್ದಾರೆ.. ಜೊತೆಗಿದ್ದ ಸಂತೋಷ್‌ ಪಾರಾಗಿ ಬಂದಿದ್ದಾರೆ.. ಇಬ್ಬರೂ ಅಂಬಳೆ ಗ್ರಾಮದವರೇ ಎಂದು ತಿಳಿದುಬಂದಿದೆ.. ಅಗ್ನಿ ಶಾಮಕ ದಳ ಹಾಗೂ ಗ್ರಾಮಾಂತರ ಪೊಲೀಸರ ನೇತೃತ್ವದಲ್ಲಿ ಸಂತೋಷ್​ ಮೃತದೇಹವನ್ನ ನೀರಿನಿಂದ ಹೊರ ತೆಗೆಯಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post