CrimeDistricts

ಚಿಕ್ಕಬಳ್ಳಾಪುರದಲ್ಲಿ 12 ಮಂದಿ ದಾರುಣ ಸಾವು; ಏನು ನಡೀತು ಗೊತ್ತಾ..?

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರದ ಬಳಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಟ್ಯಾಂಕರ್‌ ರೂಪದಲ್ಲಿ ರಸ್ತೆಯಲ್ಲೇ ಕುಳಿತಿದ್ದ ಯಮ 12 ಮಂದಿಯ ಪ್ರಾಣವನ್ನು ಹೊತ್ತೊಯ್ದಿದ್ದಾನೆ. ಚಿಕ್ಕಬಳ್ಳಾಪುರ ಸಮೀಪದ ಚಿತ್ರಾವತಿ ಬಳಿ ಇಂತಹದ್ದೊಂದು ದಾರುಣ ದುರಂತ ನಡೆದುಹೋಗಿದೆ.

ಇಂದು ಮುಂಜಾನೆ 6.30ರ ಸುಮಾರಿಗೆ ಚಿತ್ರಾವತಿ ಬಳಿ ಟ್ಯಾಂಕರ್‌ ಒಂದು ರಸ್ತೆ ಬದಿ ನಿಂತಿತ್ತು. ಅತಿಯಾದ ಮಂಜು ಇದ್ದಿದ್ದರಿಂದ ಹಿಂದೆ ಬಂದ ಟಾಟಾ ಸುಮೋ ಡ್ರೈವರ್‌ ಅದು ಕಾಣಿಸಿಲ್ಲ. ಹೀಗಾಗಿ ನೇರವಾಗಿ ಟ್ಯಾಂಕರ್‌ಗೆ  ಟಾಟಾ ಸುಮೋ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಅದರಲ್ಲಿದ್ದವರಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಆರು ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಈ ಟಾಟಾ ಸುಮೋ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಕಾರಿನಲ್ಲಿ 14 ಮಂದಿ ಇದ್ದು, ಇದರಲ್ಲಿ ಇಬ್ಬರು ತೀವ್ರ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಎಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ.

ಮೃತರು ಆಂಧ್ರದ ಗೊರೆಂಟ್ಲ ಮೂಲದವರು. ಇವರು ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದು, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ದಸರಾಗೆ ಊರಿಗೆ ಬಂದಿದ್ದರು. ಮೃತರಲ್ಲಿ ಕೆಲವರ ಹೆಸರುಗಳನ್ನು ಗುರುತಿಸಲಾಗಿದೆ. ಅರುಣಾ, ನವೀನ್ ಕುಮಾರ್, ನಂಜುಂಡಪ್ಪ, ಪದ್ಮಾವತಿ, ಋತ್ವಿಕ್ ಕುಮಾರ್ ಮೃತಪಟ್ಟಿದ್ದಾರೆ.

Share Post