Districts

ಒಂದೇ ಪಂಚಾಯ್ತಿಯ 10 ಸದಸ್ಯರು ರಾಜಿನಾಮೆ

ಚಿಕ್ಕಮಗಳೂರು: ಅಭಿವೃದ್ದಿ ಕಾರ್ಯಗಳಿಗೆ ಸ್ಪಂದಿಸದ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಒಂದೇ ಗ್ರಾಮ ಪಂಚಾಯ್ತಿಯ 10 ಜನ ಸದಸ್ಯರು ರಾಜಿನಾಮೆ ನೀಡುವ ಮೂಲಕ ಪ್ರತಿಭಟಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಡ್ಡತೋಟ ಗ್ರಾಮಪಂಚಾಯ್ತಿಯಲ್ಲಿ ಘಟನೆ ನಡೆದಿದೆ. ಪಂಚಾಯ್ತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಒಂದೇ ದಿನ 10 ಜನ ಸದಸ್ಯರು ಸಾಮೂಹಿಕವಾಗಿ ರಾಜಿನಾಮೆ ನೀಡುವ ಮೂಲಕ ಅಧಿಕಾರಿಗಳ ವಿರುದ್ದ ಪ್ರತಿಭಟಿಸಿದ್ದಾರೆ.

ರಸ್ತೆ ಅಗಲಿಕರಣ, ಲೇಔಟ್ ನಿರ್ಮಾಣಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಪ್ರತಿ ಹಂತದ ಅಧಿಕಾರಿಗಳಿಗೂ 10 ರಿಂದ 40% ವರೆಗೂ ಕಮಿಷನ್ ಕೊಡಬೇಕು ಎಂದು ಸದಸ್ಯರು ಆರೋಪಿಸಿದ್ದಾರೆ. ಅಧಿಕಾರಿಗಳ ಈ ವರ್ತೆನೆಯಿಂದ ಬೇಸತ್ತು ರಾಜಿನಾಮೆ ನೀಡುತ್ತಿದ್ದೆವೆ ಎಂದು ಸದಸ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Share Post