Districts

ಜ್ಞಾನಯೋಗಿ ಸಿದ್ದೇಶ್ವರ ಶ್ರೀಗೆ ಪೇಜಾವರ ಶ್ರೀ ಸಂತಾಪ

ಉಡುಪಿ; ಸರಳ ಸಜ್ಜನಿಕೆಯ ಸಾಕಾರಮೂರ್ತಿ ಸಿದ್ದೇಶ್ವರ ಶ್ರೀಗಳು ಹರಿಪಾದವನ್ನ ಸೇರಿದ್ದಾರೆ ಎಂದು ಉಡುಪಿಯ ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ ಸಂತಾಪ ನುಡಿಗಳನ್ನಾಡಿದ್ದಾರೆ.

ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಅಸ್ತಂಗತ ಹಿನ್ನಲೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ನಿನ್ನೆಯ ಪವಿತ್ರ ವೈಕುಂಠ ಏಕಾದಶಿಯಂದು ಹರಿಪಾದವನ್ನ ಸೇರಿದ್ದಾರೆ ಅವರ ಆತ್ಮಕ್ಕೆ ಭಗವಂತ ಸದ್ಗತಿಯನ್ನ ಕರುಣಿಸುತ್ತಾನೆ ಎಂದಿದ್ದಾರೆ‌

ಸಿದ್ದೇಶ್ವರರಿಗೆ ಸದ್ಗತಿ ಸಿಗಲಿ ಎಂಬುದು ಕೂಡ ನಮ್ಮ ಪ್ರಾರ್ಥನೆ, ಅವರ ಶಿಷ್ಯ ವರ್ಗಕ್ಕೆ ಅಗಲಿಕೆ‌‌ ಸಹಿಸುವ ಸಾಮರ್ಥ್ಯ ದೇವರು ಕರಿಣಿಸಲಿ, ಅವರು ತೋರಿದ ದಾರಿಯಲ್ಲಿ ನಡೆಯುವ ಬುದ್ದಿ ದೇವರು ಕೊಡಲಿ ಎಂದರು.

Share Post