DistrictsPolitics

ಗುಬ್ಬಿ ಶಾಸಕ ಶ್ರೀನಿವಾಸ್‌ಗೆ ಮೊದಲ ಪಟ್ಟಿಯಲ್ಲೇ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತಾ..?

ತುಮಕೂರು; ಕಾಂಗ್ರೇಸ್ ಮೊದಲ ಪಟ್ಟಿಯಲ್ಲೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಉಚ್ಚಾಟಿತ ಶಾಸಕ ಎಸ್ ಆರ್ ಶ್ರೀನಿವಾಸ್ ಗೆ ಟಿಕೆಟ್ ಘೋಷಣೆ ಆಗಲಿದೆ ಎಂಬ ಮಾತು ಬಲವಾಗಿ ಕೇಳಿ ಬಂದಿದೆ.

ತುಮಕೂರು ಜಿಲ್ಲೆ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಸ್ ವಿರುದ್ದ ಬಂಡಾಯ ಸಾರಿ ಉಚ್ಚಾಟನೆಗೆ ಒಳಗಾಗಿರುವ ಶಾಸಕ ಎಸ್ ಆರ್ ಶ್ರೀನಿವಾಸ್ ಕಾಂಗ್ರೇಸ್ ಸೇರುತ್ತಾರೆ ಎಂಬುದು ಈಗಾಗಲೇ ಜಗಜ್ಜಾಹಿರಾಗಿರುವ ವಿಷಯ, ಇದೀಗ ಕೈ ಅಭರ್ಥಿಗಳ ಮೊದಲ ಪಟ್ಟಿಯಲ್ಲೆ ಟಿಕೆಟ್ ಘೋಷಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗುಬ್ಬಿ ಶಾಸಕ ಎಸ್ ಶ್ರೀನಿವಾಸ್ ಹೇಳಿ‌ಕೇಳಿ ರಫ್ ಅಂಡ್ ಟಫ್ ಕ್ಯಾರೆಕ್ಟರ್ , ಯಾರಿಗೂ ಮುಲಾಜಿಲ್ಲದೆ ನೇರ ನೇರವಾಗಿ ಮಾತನಾಡುವ ಸ್ವಭಾವ, ಮಾಜಿ ಸಿ ಎಂ ಕುಮಾರಸ್ವಾಮಿ ವಿರುದ್ದವೂ ಮಾತಿನ ದಾಳಿ ನಡೆಸುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದರು, ಬಳಿಕ ಜೆಡಿಎಸ್ ತೊರೆದು ಕಾಂಗ್ರೇಸ್ ಸೇರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದಾಗಲೇ ಜೆಡಿಎಸ್ ನಿಂದ ಉಚ್ಚಾಟನೆ ಮಾಡಿದ್ದರು. ಇದಾವುದಕ್ಕೂ ಜಗ್ಗದೆ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಶಾಸಕ ಶ್ರೀನಿವಾಸ್ ಕಾಂಗ್ರೇಸ್ ನಾಯಕರಾದ ಕೆ ಎನ್ ರಾಜಣ್ಣ, ಡಾ ಜಿ ಪರಮೇಶ್ವರ್ ಸೇರಿದಂತೆ ಅನೇಕರ ಜೋತೆ ಗುರುತಿಸಿಕೊಂಡಿದ್ದರು. ಇದೀಗ ಕಾಂಗ್ರೇಸ್ ನ ಮೊದಲ ಪಟ್ಟಿಯಲ್ಲೆ ಟಿಕೆಟ್ ಘೋಷಣೆ ಆಗಲಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿವೆ.

ಶಾಸಕ ಶ್ರೀನಿವಾಸ್ ಗೆ ಕಾಂಗ್ರೇಸ್ ಟಿಕೆಟ್ ನೀಡುತ್ತಿರುವುದರಿಂದ ಸ್ಥಳೀಯ ಕಾಂಗ್ರೇಸ್ ನಲ್ಲಿ ಅಸಮಧಾನ ಸ್ಪೋಟಗೊಂಡಿದೆ. ಈ ಬಗ್ಗೆ ರಾಜ್ಯ ನಾಯಕರು ಗುಬ್ಬಿ ಭೇಟಿ ವೇಳೆ ಅಸಮಧಾನ ಶಮನಗೊಳಿಸುವ ಸಾದ್ಯತೆ ಇದೆ.

Share Post