CrimeDistricts

ಮುಂಬೈನಿಂದ ಬಂದಿದ್ದ ಇಬ್ಬರು ಬಾಲಕಿಯರು ಕೆರೆ ಪಾಲು!

ಚಿಕ್ಕಬಳ್ಳಾಪುರ; ಆ ಕುಟುಂಬ ಮುಂಬೈನಿಂದ ಸಂಬಂಧಿಕರ ಮನೆಗೆ ಬಂದಿತ್ತು… ಇದೇ ವೇಳೆ ಮೋಜು ಮಸ್ತಿ ಮಾಡಲು ಕೆರೆಗೆ ಹೋಗಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ದಂಡಿಗಾನಹಳ್ಳಿ ಕೆರೆ ಈ ಘಟನೆ ನಡೆದಿದೆ.. ಮುಂಬೈ ಮೂಲದ ಆಲಿಯಾ ಪಾಟೀಲ್ (14) ಹಾಗೂ ಜೋಯಾ ಪಾಟಿಲ್ (14) ನೀರು ಪಾಲಾಗಿದ್ದಾರೆ..

ಮುಂಬೈನಲ್ಲಿ ವಾಸವಿರುವ ಈ ಕುಟುಂಬದ ಸಂಬಂಧಿಕರು ಗೌರಿಬಿದನೂರಿನಲ್ಲಿದ್ದಾರೆ.. ಅವರನ್ನು ನೋಡಲೆಂದು ಮುಂಬೈನಿಂದ ಈ ಕುಟುಂಬ ಮಕ್ಕಳ ಸಮೇತ ಬಂದಿತ್ತು.. ನಿನ್ನೆ ವೀಕೆಂಡ್‌ ಮಸ್ತಿ ಮಾಡೋದಕ್ಕಾಗಿ ಅವರು ಕುಟುಂಬ ಸಮೇತ ದಂಡಿಗಾನಹಳ್ಳಿ ಕೆರೆಗೆ ಹೋಗಿದ್ದರು.. ಈ ವೇಳೆ ಇಬ್ಬರು ಬಾಲಕಿಯರು ಕೆರೆಯಲ್ಲಿ ಈಜಾಡುತ್ತಿದ್ದರು.. ಈ ವೇಳೆ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ..

ಈ ಬಗ್ಗೆ ಮಂಚೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಿಸಲಾಗಿದೆ..

 

Share Post