CrimeNational

ರೈಲು ದುರಂತ ನಡೆದು 51 ಗಂಟೆ ನಂತರ ರೈಲುಗಳ ಓಡಾಟ ಶುರು

ಭುವನೇಶ್ವರ; ಒಡಿಶಾದಲ್ಲಿ ರೈಲು ದುರಂತ ನಡೆದ ನಂತರ ಆ ಮಾರ್ಗದಲ್ಲಿ ರೈಲು ಸಂಚಾರ ಸ್ಟಾಪ್‌ ಆಗಿತ್ತು. ಇದೀಗ ಹಳಿಗಳ ದುರಸ್ತಿ ನಡೆದಿದ್ದು, ಅಪಘಾತವಾಗಿ 51 ಗಂಟೆಗಳ ಬಳಿಕ ಮೊದಲ ರೈಲು ಆ ಮಾರ್ಗದಲ್ಲಿ ಸಂಚಾರ ಮಾಡಿದೆ. ಈ ಮಾರ್ಗದಲ್ಲಿ ಈಗ ರೈಲುಗಳ ಕಾರ್ಯಾಚರಣೆ ಪ್ರಾರಂಭವಾಗಿದೆ.

ಮೊದಲಿಗೆ ಈ ಟ್ರ್ಯಾಕ್‌ನಲ್ಲಿ ಗೂಡ್ಸ್‌ ರೈಲನ್ನು ಓಡಿಸಲಾಗಿದೆ. ಅನಂತರ ಇತರೆ ರೈಲುಗಳಿಗೆ ಅವಕಾಶ ನೀಡಲಾಗಿದೆ. ನಾಶವಾಗಿದ್ದ ಎರಡೂ ಹಳಿಗಳನ್ನು ದುರಸ್ತಿ ಮಾಡಲಾಗಿದೆ. ಈಗಿನಿಂದ ರೈಲುಗಳ ಸಂಚಾರ ಮತ್ತೆ ಪ್ರಾರಂಭವಾಗುತ್ತದೆ. ಟ್ರ್ಯಾಕ್ ಲೈನ್ ರೈಲು ಓಡಾಟಕ್ಕೆ ಸುಗಮವಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

Share Post