CrimeDistricts

ಬುದ್ದಿವಾದ ಹೇಳಿದ್ದೇ ತಪ್ಪಾಯ್ತು; ಕೊಂದೇ ಬಿಟ್ಟರು ಪಾಪಿಗಳು

ಮೈಸೂರು; ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ತಿಯೊಬ್ಬನನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ. ಮೈಸೂರಿನ ಕಲ್ಯಾಣ ಗಿರಿ ನಿವಾಸಿ ಸಯ್ಯದ್ ಮನ್ಸೂರ್‌ (32) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.

ಕಲ್ಯಾಣಗಿರಿ ಏರಿಯಾದ ಜಬೀ ಎಂಬಾತ ಹುಡುಗಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಆತ‌ನಿಗೆ ಮನ್ಸೂರ್ ಬುದ್ದಿವಾದ ಹೇಳಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಜಬೀ ಹಾಗೂ ಝೈನುಲ್ಲಾ ಎಂಬುವವರು ಮನ್ಸೂರ್ ನನ್ನು ಕಿಡ್ನಾಪ್ ಮಾಡಿ ಕೊಲೆಗೈದಿದ್ದಾರೆ.

ಕಳೆದ ಭಾನುವಾರದಿಂದ ಮನ್ಸೂರ್ ನಾಪತ್ತೆಯಾಗಿದ್ದರು, ಬಳಿಕ ಜಭೀ ವಿರುದ್ದ ದೂರು ದಾಖಲಾಗಿತ್ತು. ಆದಾದ ಬಳಿಕ ಮನ್ಸೂರ್ ಕೊಲೆಯಾಗಿದ್ದಾನೆ. ಪ್ರಕರಣ ಸಂಬಂಧ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post