CrimeNational

ಯಮುನಾ ನದಿಯಲ್ಲಿ ಭೀಕರ ದುರಂತ; ದೋಣಿ ಮಗುಚಿ 20 ಮಂದಿ ದುರ್ಮರಣ

ಲಖನೌ; ಯಮುನಾ ನದಿಯಲ್ಲಿ ದೊಣಿ ಮಗುಚಿ 20 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಾಂದಾ ಬಳಿ ನಡೆದಿದೆ. ಬಾಂಧಾ ಮರಕಾ ಘಾಟ್‌ನಿಂದ ಫತೇಪುರಕ್ಕೆ ತೆರಳುತ್ತಿದ್ದ ವೇಳೆ ದೋಣಿ ನದಿಯಲ್ಲಿ ಮಗುಚಿಬಿದ್ದಿದೆ.

ಎಲ್ಲರೂ ರಾಖಿ ಹನ್ನಕ್ಕೆಂದು ತಮ್ಮ ಊರಿಗೆ ಪ್ರಯಾಣ ಬೆಳೆಸಿದ್ದರು. ಒಂದೇ ದೋಣಿಯಲ್ಲಿ ಐವತ್ತಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಮಹಿಳೆಯರು, ಮಕ್ಕಳೇ ಅದರಲ್ಲಿ ಹೆಚ್ಚಿದ್ದರು ಎಂದು ತಿಳಿದುಬಂದಿದೆ. ಐವತ್ತು ಮಂದಿಯ ಪೈಕಿ ಈಗಾಗಳೇ 20 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ನದಿಗೆ ಬಿದ್ದವರನ್ನು ರಕ್ಷಿಸಲು ಹೋದ ಇಬ್ಬರು ಈಜುಗಾರರು ಕೂಡಾ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Share Post