Crime

ಶಾಲೆಗೆ ಚಕ್ಕರ್‌, ಸಿನಿಮಾಗೆ ಹಾಜರ್:ಹೆತ್ತವರ ಭಯಕ್ಕೆ ಕಾಣೆಯಾದ ವಿದ್ಯಾರ್ಥಿಗಳು

ಗುಂಟೂರು: ಸ್ಕೂಲಿಗೆ ಚಕ್ಕರ್‌ ಹೊಡೆದು ಸಿನಿಮಾ ನೋಡ್ಕೊಂಡು ಬಂದ ನಾಲ್ವರು ವಿದ್ಯಾರ್ಥಿಗಳು ಹೆತ್ತವರಿಗೆ ಹೆದರಿ ಕಾಣೆಯಾಗಿರುವ ಘಟನೆ ಗುಂಟೂರು ಜಿಲ್ಲೆ ಮಂಗಳಗಿರಿ ನಗರದಲ್ಲಿ ನಡೆದಿದೆ. ಮಂಗಳಗಿರಿ ನಿವಾಸಿಗಳಾದ ವೆಂಕಟೇಶ್‌,  ಸಂತೋಷ್‌, ವೆಂಕಟೇಶ್‌ ಗೌಡ ಹಾಗೂ ಪ್ರಭುದೇವಾ ನಾಲ್ವರು ಆತ್ಮೀಯ ಸ್ನೇಹಿತರಾಗಿದ್ದು ಸೋಮವಾರ ಶಾಲಾಗೆ ಹೋಗದೆ ಸಿನಿಮಾಗೆ ಹೋಗಿದ್ದಾರೆ, ಸಿನಿಮಾ ಮುಗಿದ ಬಳಿಕ ಸಂಜೆ 4ಗಂಟೆಗೆ ಸ್ಕೂಲ್‌ಗೆ ಬಂದಿದ್ದಾರೆ ಇದನ್ನು ಗಮನಿಸಿದ ಹೆಡ್‌ ಮಾಸ್ಟರ್‌ ಇವತ್ತು ಶಾಲೆಗ್ಯಾಕೆ ಬಂದಿಲ್ಲ? ನಾಳೆ ನಿಮ್ಮ ಹೆತ್ತವರನ್ನು ಕರೆತನ್ನಿ ಎಂದಿದ್ದಾರೆ, ಮಾಸ್ಟರ್‌ ಹೇಳಿದ ಮಾತಿಗೆ ವಿದ್ಯಾರ್ಥಿಗಳು ಭಯಪಟ್ಟು ಈ ವಿಚಾರ ಮನೆಯಲ್ಲಿ ತಿಳಿದರೆ ಹೊಡೆಯುತ್ತಾರೆಂಬ ಭಯಕ್ಕೆ ಮನೆಗೆ ಹೋಗದೆ ಪರಾರಿಯಾಗಿದ್ದಾರೆ. ಸಂಜೆಯಾದರು ಮಕ್ಕಳು ಮನೆಗೆ ಬಾರದಕ್ಕೆ ಹೆತ್ತವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಸದ್ಯ ಕಾಣೆಯಾಗಿರುವ ಮಕ್ಕಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

 

Share Post