CrimeDistricts

485 ರೂಪಾಯಿಗಾಗಿ ಇಬ್ಬರು ಕಾವಲುಗಾರನನ್ನು ಕೊಂದ ಪಾಪಿ

ಮೈಸೂರು; ಅವರ ಬರೀ 485 ರೂಪಾಯಿ ಇತ್ತು. ಹೆದರಿಸಿದ್ದರು ಅವರೇ ಕೊಟ್ಟುಬಿಡುತ್ತಿದ್ದರು ಅನಿಸುತ್ತೆ. ಆದ್ರೆ ಆ ಪಾಪಿ ಬರೀ 485 ರೂಪಾಯಿಗಾಗಿ ಇಬ್ಬರನ್ನೂ ಸಾಯಿಸಿಬಿಟ್ಟಿದ್ದಾನೆ. ಈ ಘಟನೆ ನಡೆದಿರೋದು ಮೈಸೂರಿನ ಹುಣಸೂರಿನಲ್ಲಿ. ಇಲ್ಲಿ ಮಿಸ್ಬಾ ಸಾಮಿಲ್‌ನಲ್ಲಿ ಕಾವಲುಗಾರರಾಗಿರುವ ವೆಂಕಟೇಶ್‌ ಹಾಗೂ ಷಣ್ಮುಖ ಎಂಬುವವರೇ ಕೊಲೆಯಾದ ದುರ್ದೈವಿಗಳು.

ವೆಂಕಟೇಶ್‌ ಅವರು 75 ವರ್ಷವಾಗಿದ್ದರೆ, ಷಣ್ಮುಖ ಅವರಿಗೆ 65 ವರ್ಷ ವಯಸ್ಸಾಗಿತ್ತು. ಅಭಿಷೇಕ್‌ ಎಂಬಾತನೇ ಕೊಲೆಗಾರ. ಈತ ಇಬ್ಬರೂ ಕಾವಲುಗಾರರನ್ನು ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಅನಂತರ ಅವರ ಬಳಿ ಇದ್ದ ಕೇವಲ 485 ರೂಪಾಯಿ ತೆಗೆದುಕೊಂಡು ಪರಾರಿಯಾಗಿದ್ದ. ಪೊಲೀಸರು ಶ್ವಾನ ದಳದ ಮೂಲದ ಆರೋಪಿಯ ಪತ್ತೆಗೆ ಮುಂದಾದರು. ಈ ವೇಳೆ ನಾಯಿಗಳು, ಆರೋಪಿ ಅಭಿಷೇಕ್‌ ಮನೆಯ ಬಳಿ ಬಂದು ನಿಂತಿವೆ. ಹೀಗಾಗಿ ಅಭಿಷೇಕ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿ ಈ ಹಿಂದೆಯೂ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಕಳ್ಳತನ, ಕೊಲೆ ಪ್ರಕರಣಗಳು ಕೂಡಾ ಈತನ ಮೇಲಿದ್ದವು ಎಂದು ತಿಳಿದುಬಂದಿದೆ. ಗಾಂಜಾ ದಾಸನಾಗಿದ್ದ ಈತ ದಿನವೂ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.

Share Post