CrimePolitics

ಸೂರಜ್‌ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯ ದೂರು!; ಗೌಡರ ಕುಟುಂಬಕ್ಕೆ ಮತ್ತೊಂದು ಮುಜುಗರ!

ರೇವಣ್ಣ ಅವರ ಮಗ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯದ ಆರೋಪದ ಅಡಿಯಲ್ಲಿ ಜೈಲು ಸೇರಿದ್ದಾರೆ.. ಇದೀಗ ಅವರ ಹಿರಿಯ ಪುತ್ರ ಸೂರಜ್‌ ರೇವಣ್ಣ ವಿರುದ್ಧ ಕೂಡಾ ಇಂತಹದ್ದೇ ಆರೋಪ ಕೇಳಿಬಂದಿದೆ.. ಪರಿಷತ್‌ ಸದಸ್ಯರೂ ಆಗಿರುವ ಸೂರಜ್‌ ರೇವಣ್ಣ, ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಂತ್ರಸ್ತ ಯುವಕನೊಬ್ಬ ದೂರು ಕೊಟ್ಟಿದ್ದಾರೆ. ಸೂರಜ್‌ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬರುತ್ತಿದ್ದಂತೆ, ಸೂರಜ್‌ ಕಡೆಯಿಂದಲೂ ಸಂತ್ರಸ್ತನ ವಿರುದ್ಧ ಕೇಸ್‌ ದಾಖಲು ಮಾಡಲಾಗಿದೆ..

ಹಾಸನ ಜಿಲ್ಲೆ ಅರಕಲಗೂಡಿನ ಜೆಡಿಎಸ್‌ ಪಕ್ಷದ ಕಾರ್ಯಕರ್ತನೇ ಆಗಿರುವ ವ್ಯಕ್ತಿಯೊಬ್ಬ ನನ್ನ ಮೇಲೆ ಸಲಿಂಗ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ದೇವೇಗೌಡರ ಮೊಮ್ಮಗ ಸೂರಜ್‌ ರೇವಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.. ಜೊತೆಗೆ ಡಿಜಿ-ಐಜಿಪಿ ದೂರು ಕೂಡಾ ನೀಡಿದ್ದಾರೆ..

ಇನ್ನು ದೂರಿನಲ್ಲಿ ಸಂತ್ರಸ್ತ ಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ನಾನು ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್‌ ಪರ ಓಡಾಟ ನಡೆಸುತ್ತಿದ್ದೆ.. ಇದನ್ನು ನೋಡಿದ್ದ ಸೂರಜ್‌ ರೇವಣ್ಣ ಅವರು, ಚೆನ್ನಾಗಿ ಕೆಲಸ ಮಾಡುತ್ತಿದ್ದೀಯ ನೀನು ಎಂದು ಹೊಗಳಿದ್ದರು.. ನಿನ್ನ ನಂಬರ್‌ ಕೊಡು ನಿನ್ನ ಲೈಫ್‌ ಸೆಟ್ಲ್‌ ಮಾಡ್ತೀನಿ ಎಂದು ಹೇಳಿ ನನ್ನ ನಂಬರ್‌ ಪಡೆದುಕೊಂಡಿದ್ದರು.. ಜೊತೆಗೆ ನಾನು ಫೋನ್‌ ಮಾಡ್ತೀನಿ ಆಗ ನನ್ನನ್ನು ಭೇಟಿಯಾಗು ಎಂದು ಹೇಳಿದ್ದರು.. ಅದರಂತೆ ಜೂನ್‌ 14ರಂದು ಸೂರಜ್‌ ಅವರು ಗುಡ್‌ ಇವನಿಂಗ್‌ ಕಣೋ ಅಂತ ಲವ್‌ ಸಿಂಬಲ್‌ ಜೊತೆಗೆ ವಾಟ್ಸಾಪ್‌ನಲ್ಲಿ ನನಗೆ ಮೆಸೇಜ್‌ ಮಾಡಿದ್ದರು.. ಅದಕ್ಕೆ ನಾನು ವೆರಿ ಗುಡ್‌ ಮಾರ್ನಿಂಗ್‌ ಅಣ್ಣ ಎಂದು ರಿಪ್ಲೈ ಮಾಡಿದ್ದೆ.. ಬಳಿಕ ಅವರು ಚನ್ನರಾಯಪಟ್ಟಣ ತಾಲೂಕಿನ ಗನ್ನಿಕಡದ ತೋಟದ ಮನೆಗೆ ಒಬ್ಬನೇ ಬರುವಂತೆ ತಿಳಿಸಿದ್ದರು.. ಜೂನ್ 16ರ ಭಾನುವಾರ ಸಂಜೆ ನಾನು ಆ ಮನೆಗೆ ಹೋಗಿದ್ದೆ.. ಈ ವೇಳೆ ನನ್ನನ್ನು ಬಲವಂತ ಮಾಡಿ, ನನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಂತ್ರಸ್ತ ಯುವಕ ಆರೋಪ ಮಾಡಿದ್ದಾರೆ..

ಘಟನೆ ನಂತರ ಯಾರಿಗೂ ವಿಚಾರ ಹೇಳದಂತೆ ನನಗೆ ಬೆದರಿಕೆ ಹಾಕಲಾಗಿತ್ತು.. ಜೊತೆಗೆ 2 ಕೋಟಿ ರೂಪಾಯಿ ಹಣ ಕೊಡುವುದಾಗಿಯೂ ಆಮಿಷವೊಡ್ಡಿದ್ದರು.. ಇದಕ್ಕೆ ನಾನು ಒಪ್ಪದಿದ್ದಾಗ ನನ್ನನ್ನು ಕೊಲೆ ಮಾಡಲು ಹುಡುಕುತ್ತಿರುವ ತಿಳಿಯಿತು.. ಹೀಗಾಗಿ ಬೆಂಗಳೂರಿಗೆ ಬಂದು ದೂರು ಕೊಟ್ಟಿದ್ದೇವೆ ಅಂತ ಸಂತ್ರಸ್ತ ತಿಳಿಸಿದ್ದಾನೆ..

ಇನ್ನೊಂದೆಡೆ, ಸಂತ್ರಸ್ತನ ವಿರುದ್ಧವೂ ಸೂರಜ್‌ ರೇವಣ್ಣ ಕಡೆಯವರು ದೂರು ನೀಡಿದ್ದಾರೆ.. ತೋಟದ ಮನೆಗೆ ಹೋಗಿ ಬಂದ ಬಳಿ ಸೂರಜ್‌ ಆಪ್ತ ಶಿವಕುಮಾರ್‌ಗೆ ಕರೆ ಮಾಡಿದ್ದ ಸಂತ್ರಸ್ತ, ನೀನೂ ಕೆಲಸ ಕೊಡಿಸೋದಿಲ್ಲ, ಬಾಸೂ ಕೆಲಸ ಕೊಡಿಸೋದಿಲ್ಲ.. ನೀನು ಬಾಸ್‌ನಿಂದ ಐದು ಕೋಟಿ ರೂಪಾಯಿ ಕೊಡಿಸಬೇಕು.. ಇಲ್ಲದಿದ್ದರೆ ಲೈಂಗಿಕ ದೌರ್ಜನ್ಯದ ಕೇಸ್‌ ದಾಖಲಿಸುತ್ತೇನೆ ಎಂದು ಬ್ಲ್ಯಾಕ್‌ ಮೇಲ್‌ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ..

 

Share Post