CinemaCrime

ಪತ್ರಕರ್ತನಿಂದ ಫೋನ್‌ ಕಿತ್ತುಕೊಂಡ ಪ್ರಕರಣ; ಸಲ್ಮಾನ್‌ಖಾನ್‌ಗೆ ಸಮನ್ಸ್‌

ಮುಂಬೈ: ಪತ್ರಕರ್ತರೊಬ್ಬರ ಫೋನ್ ಕಿತ್ತುಕೊಂಡು ಆತನೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಸಲ್ಮಾನ್ ಮತ್ತು ಆತನ ಅಂಗರಕ್ಷಕನ ವಿರುದ್ಧ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರಿಗೆ ಹೊಸದಾಗಿ ಸಮನ್ಸ್ ಜಾರಿ ಮಾಡಿತ್ತು. ಇದೀಗ ಈ ವಿಚಾರವಾಗಿ ನಟ ಸಲ್ಮಾನ್‌ ಖಾನ್‌ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 2019ರಿಂದ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಏ. 5ಕ್ಕೆ ಸಮನ್ಸ್ ಜಾರಿಯಾಗಿತ್ತು.

ಸಲ್ಮಾನ್ ಖಾನ್‌ಗೆ ನೀಡಿದ ಸಮನ್ಸ್ ಪ್ರಕಾರ, ಅವರು ಏ. 5ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಮುಂಬೈನ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಸಲ್ಮಾನ್ ವಿರುದ್ಧ ದೂರು ದಾಖಲಿಸಿದ್ದರು.

Share Post