BengaluruCrime

ಹಾಡಹಗಲೇ ನಾಗರಭಾವಿಯಲ್ಲಿ 15 ಲಕ್ಷ ರೂಪಾಯಿ ದರೋಡೆ

ಬೆಂಗಳೂರು; ಸಿಗರೇಟ್‌ ಡಿಸ್ಟ್ರಿಬ್ಯೂಟರ್‌ ಒಬ್ಬರಿಂದ 15 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ ಬೆಂಗಳೂರಿನ ನಾಗರಭಾವಿಯ ಪಾಪಿರೆಡ್ಡಿ ಪಾಳ್ಯದಲ್ಲಿ ಮೂವರು ದುಷ್ಕರ್ಮಿಗಳು, ಮಚ್ಚು-ಲಾಂಗು ತೋರಿಸಿ ವ್ಯಾಪಾರಿಯಿಂದ ಹಣ ದೋಚಿದ್ದಾರೆ.

ಗೋಪಾಲ್‌ ಎಂಬುವವರೇ ಹಣ ಕಳೆದುಕೊಂಡವರು. ಇವರು ಸಿಗರೇಟ್‌ ಡಿಸ್ಟ್ರಿಬ್ಯೂಟರ್‌ ಆಗಿದ್ದಾರೆ. ನಿನ್ನೆ ಮಧ್ಯಾಹ್ನ ಗೋಪಾಲ್‌ ಅವರು ಟಾಟಾ ಏಸ್‌ ವಾಹನದಲ್ಲಿ ಅಂಗಡಿಗಳಿಂದ ಹಣ ಕಲೆಕ್ಟ್‌ ಮಾಡುತ್ತಿದ್ದರು. ಇದನ್ನು ಡಿಯೋ ಸ್ಕೂಟರ್‌ನಲ್ಲಿ ಹಿಂಬಾಲಿಸಿದ್ದ ಮೂವರು ದುಷ್ಕರ್ಮಿಗಳು, ಪಾಪಿರೆಡ್ಡಿ ಪಾಳ್ಯದ ಅಂಗಡಿಯೊಂದರ ಬಳಿ ಟಾಟಾ ಏಸ್‌ ನಿಲ್ಲಿಸಿ ಗೋಪಾಲ್‌ ಕೆಳಗೆ ಇಳಿಯುತ್ತಿದ್ದಂತೆ ದಾಳಿ ಮಾಡಿದ್ದಾರೆ. ಮಚ್ಚು, ಗನ್‌ ತೋರಿಸಿ ಅವರ ಬಳಿ ಇದ್ದ 15 ಲಕ್ಷ ರೂಪಾಯಿ ಹಣ ದೋಚಿಕೊಂಡು ಹೋಗಿದ್ದಾರೆ.

 

Share Post