CrimeNational

ಚೆನ್ನೈ-ಬೆಂಗಳೂರು ರಸ್ತೆಯಲ್ಲಿ ಭೀಕರ ಅಪಘಾತ; 7 ಮಹಿಳೆಯರ ದುರ್ಮರಣ

ಚೆನ್ನೈ; ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಮಂದಿ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಚೆನ್ನೈ-ಬೆಂಗಳೂರು ಹೆದ್ದಾರಿಯ ನೆಟ್ರಂಪಳ್ಳಿ ಬಳಿ ಈ ಅಪಘಾತ ಸಂಭವಿಸಿದೆ.

ವ್ಯಾನ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹತ್ತು ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು ಮೀನಾ (50), ಡಿ.ದೇವಯಾನಿ (32), ಸೈಟ್ಟು (55), ದೇವಿಕಾ (50), ಸಾವಿತ್ರಿ (42), ಕಲಾವತಿ (50) ಮತ್ತು ಆರ್ ಗೀತಾ (34) ಎಂದು ಗುರುತಿಸಲಾಗಿದೆ.

ಮಹಿಳೆಯರೆಲ್ಲಾ ಸೇರಿ ಪ್ರವಾಸ ಕೈಗೊಂಡಿದ್ದರು. ವ್ಯಾನ್‌ ಒಂದರಲ್ಲಿ ವೆಲ್ಲೂರಿನ ಪೆರ್ನಂಬುಟ್‌ನಿಂದ ಪ್ರವಾಸ ಹೋಗಿದ್ದ ಮಹಿಳೆಯರು, ಪ್ರವಾರ ಮುಗಿಸಿ ವಾಪಸ್‌ ಬರುತ್ತಿದ್ದರು. ಈ ವೇಳೆ ವ್ಯಾನ್‌ನ ಚಕ್ರವೊಂದ ಪಂಕ್ಚರ್‌ ಆಗಿದೆ. ಹೀಗಾಗಿ ರಸ್ತೆ ಪಕ್ಕ ನಿಲ್ಲಿಸಿ, ಟೈರ್‌ ಬದಲಿಸಲಾಗುತ್ತಿತ್ತು. ಇದರಿಂದಾಗಿ ವ್ಯಾನ್‌ನಲ್ಲಿದ್ದ ಮಹಿಳೆಯರು, ರಸ್ತೆ ಬದಿಯಲ್ಲಿದ್ದ ಸಿಮೆಂಟ್‌ ಕಟ್ಟೆಯ ಮೇಲೆ ಕುಳಿತಿದ್ದರು. ಇದೇ ವೇಲೆ ಬಂದ ಲಾರಿ ನಿಂತಿದ್ದ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಆ ವ್ಯಾನ್‌ ಮಹಿಳೆಯರ ಮೇಲೆ ಉರುಳಿದ್ದರಿಂದ ಈ ದುರಂತ ಸಂಭವಿಸಿದೆ.

 

Share Post