BengaluruCrime

ಪ್ರಾಣಭಿಕ್ಷೆಗಾಗಿ ಅಂಗಲಾಚಿದ ರೇಣುಕಾಸ್ವಾಮಿ!; ಹೃದಯವಿದ್ರಾವಕ ಫೋಟೋ ವೈರಲ್‌!

ಬೆಂಗಳೂರು; ಚಿತ್ರದುರ್ಗದ ರೇಣುಸ್ವಾಮಿಯನ್ನು ಮೂರು ತಿಂಗಳ ಹಿಂದೆ ದರ್ಶನ್‌ ಅಂಡ್‌ ಗ್ಯಾಂಗ್‌ ಹತ್ಯೆ ಮಾಡಿತ್ತು.. ಈ ಪ್ರಕರಣದ ದೋಷಾರೋಪ ಪಟ್ಟಿಯನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ.. ಇದರ ನಡುವೆ ರೇಣುಕಾಸ್ವಾಮಿ ತನಗೆ ಪ್ರಾಣಭಿಕ್ಷೆ ನೀಡುವಂತೆ ಅಂಗಲಾಚುತ್ತಿರುವ ಫೋಟೋ ಒಂದು ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ದೇಗುಲದ ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ!

ಕೋರ್ಟ್‌ಗೆ ಸಲ್ಲಿಸುವ ಮುನ್ನ ದಾಖಲೆಗಳಿಂದ ಈ ಫೋಟೋ ಲೀಕ್‌ ಆಗಿದೆ ಎಂದು ಹೇಳಲಾಗುತ್ತಿದೆ.. ಇದರಲ್ಲಿ ರೇಣುಕಾಸ್ವಾಮಿಯನ್ನು ಅರೆಬೆತ್ತಲೆಯಾಗಿ ಕೂರಿಸಲಾಗಿದೆ.. ಆತ ಕೆಳಗೆ ಕೂತು ಬೇಡಿಕೊಳ್ಳುತ್ತಿರುವಂತೆ ಫೋಟೋ ಇದೆ.. ಕಣ್ಣೀರಿಡುತ್ತಾ ರೇಣುಕಾಸ್ವಾಮಿ ತನ್ನನ್ನು ಬಿಟ್ಟುಬಿಡುವಂತೆ ಗೋಗರೆಯುತ್ತಿದ್ದಾನೆ..
ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದು ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗಿತ್ತು.. ಹತ್ತಕ್ಕೂ ಹೆಚ್ಚು ಮಂದಿ ನಿರಂತರವಾಗಿ ಹಲ್ಲೆ ಮಾಡಿದ್ದರಿಂದ ರೇಣುಕಾಸ್ವಾಮಿ ಉಸಿರು ಚೆಲ್ಲಿದ್ದ.. ಅನಂತರ ಶವವನ್ನು ಸುಮನಹಳ್ಳಿ ಬಳಿ ರಾಜಕಾಲುವೆ ಹತ್ತಿರ ಬಿಸಾಡಿಹೋಗಲಾಗಿತ್ತು..

ಇದನ್ನೂ ಓದಿ; ಮ್ಯೂಸಿಯಂನಲ್ಲಿ 15 ಕೋಟಿ ಮೌಲ್ಯದ ಚಿನ್ನ ಕದ್ದ; ಮುಂದೆ ಆಗಿದ್ದೇನು..?

Share Post