BengaluruCrime

ರೇಣುಕಾಸ್ವಾಮಿ ಕೊಲೆ ಆರೋಪಿ ರಘು ಕೂಡಾ ಕಾಲ್‌ ಮಾಡಿದ್ದನಂತೆ!

ಬೆಂಗಳೂರು; ಪರಪ್ಪನ ಅಗ್ರಹಾರದ ಜೈಲಿನಲ್ಲಿ ಎಲ್ಲಾ ವ್ಯವಸ್ಥೆಯೂ ಇದೆ.. ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡಬಹುದು ಎಂಬ ಆರೋಪಕ್ಕೆ ಪ್ರಬಲವಾದ ಸಾಕ್ಷಿಗಳು ಸಿಗುತ್ತಿವೆ.. ನಿನ್ನೆಯಷ್ಟೇ, ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್‌, ರೌಡಿಶೀಟರ್‌ಗಳ ಜೊತೆ ಆರಾಮಾಗಿ ಕುಳಿತುಕೊಂಡು ಕಾಫಿ ಕುಡಿಯುತ್ತಾ, ಸಿಗರೇಟ್‌ ಸೇದುತ್ತಾ ಇದ್ದ ಫೋಟೋ ವೈರಲ್‌ ಆಗಿತ್ತು.. ಅನಂತರ ರೌಡಿಶೀಟರ್‌ ಒಬ್ಬನ ಸಹೋದರನ ಜೊತೆ ವಿಡಿಯೋ ಕಾಲ್‌ನಲ್ಲಿ ದರ್ಶನ್‌ ಮಾತನಾಡಿದ್ದ ವಿಡಿಯೋ ಕೂಡಾ ವೈರಲ್‌ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.. ಇದೀಗ ದರ್ಶನ್‌ ಒಬ್ಬರೇ ಅಲ್ಲ, ಇತರೆ ರೇಣುಕಾಸ್ವಾಮಿ ಕೊಲೆ ಆರೋಪಿಗಳೂ ವಿಡಿಯೋ ಕಾಲ್‌ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗಿದೆ..

ಇದನ್ನೂ ಓದಿ; ದರೋಡೆ ಮಾಡಲು ಬಂದಾತನಿಂದ 70 ವರ್ಷದ ವೃದ್ಧೆ ಮೇಲೆ ಅತ್ಯಾಚಾರ!

ರೇಣುಕಾಸ್ವಾಮಿ ಕೊಲೆ ಪ್ರಕರಣದ A-4 ಆರೋಪಿ ರಘು ಕೂಡಾ ಜೈಲಿನಿಂದ ವಿಡಿಯೋ ಕಾಲ್‌ ಮಾಡಿದ್ದನಂತೆ.. ಇದನ್ನು ಸ್ವತಃ ರಘು ಸಹೋದರ ಮುರಳಿ ಹೇಳಿಕೊಂಡಿದ್ದಾರೆ.. ನನ್ನ ಇನ್ನೊಬ್ಬ ಸಹೋದರನಿಗೆ ರಘು ವಿಡಿಯೋ ಕಾಲ್‌ ಮಾಡಿದ್ದ, ಆದಷ್ಟು ಬೇಗ ಹೊರಗೆ ಬರ್ತೀನಿ ಅಂತ ಹೇಳಿದ್ದಾನೆ ಎಂದು ರಘು ಸಹೋದರ ಮುರಳಿ ಬಾಯ್ಬಿಟ್ಟಿದ್ದಾರೆ.. ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡುತ್ತಾರೆ ಅವರು ಈ ವಿಚಾರ ಬಾಯ್ಬಿಟ್ಟಿದ್ದಾರೆ..
ಜೊತೆಗೆ ಜೈಲಿನಲ್ಲಿ ದರ್ಶನ್‌ಗೆ ಏನೆಲ್ಲಾ ಪೆಸಿಲಿಟಿ ಸಿಗುತ್ತದೆಯೋ ಅದೆಲ್ಲವೂ ರಘುಗೂ ಹಾಗೂ ಇತರೆ ಆರೋಪಿಗಳಿಗೂ ಸಿಗಬೇಕು ಎಂದು ರಘು ಸಹೋದರ ಮುರುಳಿ ಆಗ್ರಹ ಮಾಡಿದ್ದಾರೆ..

ಇದನ್ನೂ ಓದಿ; ಮಗಳೇ ಎನ್ನುತ್ತಲೇ ಕಿರುಕುಳ ಕೊಟ್ಟರು!; ಹಿರಿಯ ನಟನ ವಿರುದ್ಧ ಆರೋಪ!

Share Post