CrimePolitics

Breaking – ಪ್ರಾಸಿಕ್ಯೂಷನ್‌ ಕೇಸ್‌; ಸಿದ್ದರಾಮಯ್ಯಗೆ ರಿಲೀಫ್‌

ಬೆಂಗಳೂರು; ರಾಜ್ಯಪಾಲ ಥಾವರ್‌ ಚಂದ್‌ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ ವಿರೋಧಿಸಿ ಸಲ್ಲಿಸಿರುವ ರಿಟ್‌ ಪಿಟಿಷನ್‌ ವಿಚಾರಣೆಯನ್ನು ಹೈಕೋರ್ಟ್‌ ಸೆಪ್ಟೆಂಬರ್‌ 9 ಕ್ಕೆ ಮುಂದೂಡಲಾಗಿದೆ..

ಇವತ್ತೂ ಕೂಡಾ ರಾಜ್ಯಪಾಲರ ಪರ ವಕೀಲ, ಇತರೆ ದೂರುದಾರರ ಪರ ವಕೀಲರು ಇಂದು ವಾದ ಮಂಡನೆ ಮಾಡಿದರು.. ಪ್ರಕರಣದಲ್ಲಿ ಮಾಲೀಕರೇ ಅಲ್ಲದವರು ಮುಡಾಗೆ ಅರ್ಜಿ ಸಲ್ಲಿಸಿದ್ದಾರೆ.. ಡಿನೋಟಿಫೈ ಮಾಡಿಸಿಕೊಂಡಿದ್ದಾರೆ.. ಜಮೀನೇ ಇಲ್ಲದಿದ್ದರೂ ಪರಿಹಾರವಾಗಿ 14 ಸೈಟ್‌ಗಳನ್ನು ಪಡೆಯಲಾಗಿದೆ ಎಂದು ವಾದ ಮಾಡಲಾಗಿದೆ..

ಇನ್ನು ಸಿಎಂ ಪರ ವಕೀಲರು ವಾದ ಮಂಡನೆ ಮಾಡಬೇಕಾದ ಅವಶ್ಯಕತೆ ಇದೆ.. ಸಿಎಂ ಪರ ವಕೀಲರು ಸಮಯಾವಕಾಶ ಕೇಳಿದ್ದರಿಂದ ಜಡ್ಜ್‌ ಅದಕ್ಕೆ ಅವಕಾಶ ಕೊಟ್ಟಿದ್ದಾರೆ.. ಸೋಮವಾರಕ್ಕೆ ವಿಚಾರಣೆ ಮುಂದೂಡಿದ್ದಾರೆ.. ಹೀಗಾಗಿ, ಸಿಎಂ ಸಿದ್ದರಾಮಯ್ಯ ಅವರಿಗೆ ಸೋಮವಾರದವರೆಗೆ ರಿಲೀಫ್‌ ಸಿಕ್ಕಿದೆ..

Share Post