CrimeDistrictsPolitics

ಉಗ್ರನಂತೆ ಬಿಂಬಿಸಿ ಪ್ರತಾಪ ಸಿಂಹ ಪೋಸ್ಟರ್‌; ಮೈಸೂರಲ್ಲಿ ವಿವಾದಿತ ಫ್ಲೆಕ್ಸ್‌

ಮೈಸೂರು; ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ಪ್ರಕರಣದ ಆರೋಪಿಗಳಿಗೆ ಸಂಸದ ಪ್ರತಾಪ ಸಿಂಹ ಕಚೇರಿಯಿಂದ ಪಾಸ್‌ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಾಪ ಸಿಂಹ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆಗಳು ಜೋರಾಗಿವೆ. ಇಂದು ಪ್ರತಾಪ ಸಿಂಹ ಅವರನ್ನು ಉಗ್ರನಂತೆ ಚಿತ್ರಿಸಿ ಫ್ಲೆಕ್ಸ್‌ ಹಾಕಲಾಗಿದೆ. ಇದರಲ್ಲಿ ಪ್ರತಾಪ ಸಿಂಹ ಬಾಂಬ್‌ ಹಾಗೂ ಪಾಸ್‌ ಹಿಡಿದಿರುವಂತೆ ಚಿತ್ರಿಸಲಾಗಿದ್ದು ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮೈಸೂರಿನ ಮಹಾರಾಜ ವೃತ್ತದ ಬಳಿ ಇಂತಹ ವಿವಾದಿತ ಫ್ಲೆಕ್ಸ್‌ ಅಳವಡಿಸಿದೆ. ಅದರ ಮೇಲೆ ಸಂಸದ ಪ್ರತಾಪ ಸಿಂಹ ದೇಶದ್ರೋಹಿ ಎಂದು ಬರೆಯಲಾಗಿದೆ. ಪ್ರತಾಪ ಸಿಂಹ ಅವರನ್ನು ಸಂಸತ್‌ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಪ್ರತಿಭಟನೆ ನಡೆಸಿದೆ.

ಇನ್ನು ಇದೇ ವೇಳೆ ಪಾಲಿಕೆ ಸಿಬ್ಬಂದಿ ವಿವಾದಿತ ಫ್ಲೆಕ್ಸ್‌ ತೆರವು ಮಾಡಲು ಮುಂದಾಗಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಹಾಗೂ ಪಾಲಿಕೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.

 

Share Post