CrimeDistricts

ಪ್ರಿಯತಮನ ಮೇಲೆ ಬಿಸಿ ಎರಚಿಸಿದ ಪ್ರಿಯತಮೆಯ ಪೋಷಕರು; ಮಡಿಕೇರಿಯಲ್ಲಿ ನಡೆದಿದ್ದೇನು..?

ಮಡಿಕೇರಿ; ಪೋಷಕರಿಂದ ಬಂಧಿಯಾಗಿದ್ದ ಪ್ರಿಯತಮೆಯನ್ನು ಕರೆದುಕೊಂಡು ಬರಲು ಹೋಗಿದ್ದ ಪ್ರಿಯತಮನ ಮೇಲೆ ಬಿಸಿ ನೀರು ಎರಚಿರುವ ದಾರುಣ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.. ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ಗಣಪತಿ ಬೀದಿ‌ ನಿವಾಸಿ ಸುಹೇಲ್ ದಾಳಿಗೊಳಗಾದವರು.. ಬಿಸಿನೀರು ಎರಚಿದ್ದರಿಂದ ಈತನ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಸುಟ್ಟ ಗಾಯಗಳಾಗಿದ್ದು, ಬೊಬ್ಬೆಗಳಾಗಿವೆ.. ಇದರಿಂದಾಗಿ ಸುಹೇಲ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಸುಹೇಲ್‌ ಮದೆನಾಡು ಗ್ರಾಮದ ತಮ್ಮದೇ ಸಮುದಾಯದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದಾನೆ.. ಆಕೆಯೂ ಈತನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಲಾಗಿದೆ.. ಸುಹೇಲ್‌ಗೆ ಕರೆ ಮಾಡಿದ್ದ ಪ್ರಿಯತಮೆ, ನನಗೆ ಮನೆಯಲ್ಲಿ ತುಂಬಾ ಹಿಂಸೆ ಎನಿಸುತ್ತಿದೆ.. ಮನೆಯಲ್ಲಿ ಇರೋದಕ್ಕೆ ನನಗೆ ಆಗೋದಿಲ್ಲ.. ನನ್ನನ್ನು ಕರೆದುಕೊಂಡು ಹೋಗು ಎಂದು ಆಕೆ ಹೇಳಿದ್ದಳಂತೆ.. ಹೀಗಾಗಿ ಆಕೆಯನ್ನು ಕರೆದುಕೊಂಡು ಬರಲು ಸುಹೇಲ್‌ ಆಕೆಯ ಮನೆ ಬಳಿ ಹೋಗಿದ್ದಾನೆ..
ಈ ವೇಳೆ ಯುವತಿಯ ತಂದೆ ಸುಹೇಲ್‌ ಜೊತೆ ಜಗಳ ತೆಗೆದಿದ್ದಾನೆ.. ಜೋರು ಗಲಾಟೆ ಮಾಡಿದ್ದಾನೆ.. ಸಾಲದೆಂಬಂತೆ ಸುಹೇಲ್‌ ಮೇಲೆ ಬಿಸಿ ಬಿಸಿಯಾದ ನೀರನ್ನು ಎರಚಿದ್ದಾನೆ.. ಇದರಿಂದಾಗಿ ಸುಹೇಲ್‌ ತೀವ್ರವಾಗಿ ಗಾಯಗೊಂಡಿದ್ದಾರೆ.. ಸದ್ಯ ಸುಹೇಲ್‌ಗೆ ಮಡಿಕೇರಿ ಕೊಯಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ..

Share Post