CrimeNational

ನರ್ಸಿಂಗ್‌ ವಿದ್ಯಾರ್ಥಿನಿ ಕೊಲೆ; ಕಣ್ಣು ಕಿತ್ತು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು!

ಹೈದರಾಬಾದ್‌; ನರ್ಸಿಂಗ್‌ ಓದುತ್ತಿದ್ದ ವಿದ್ಯಾರ್ಥಿನಿಯ ಕಣ್ಣುಗಳನ್ನು ಕಬ್ಬಿಣದ ರಾಡ್‌ನಿಂದ ಕಿತ್ತು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ವಿಕಾರಾಬಾದ್‌ ಜಿಲ್ಲೆಯ ಕಾಲಾಪುರ ಗ್ರಾಮದಲ್ಲಿ ಈ ಕೃತ್ಯ ಎಸಗಲಾಗಿದೆ. ಸಿರಿಶಾ ಎಂಬಾಕೆಯೇ ಭೀಕರವಾಗಿ ಕೊಲೆಯಾಗಿರುವ ನರ್ಸಿಂಗ್‌ ವಿದ್ಯಾರ್ಥಿನಿ.

ಸೋದರ ಮಾವನ ಜೊತೆ ಜೂನ್‌ ಹತ್ತರಂದು ರಾತ್ರಿ ಜಗಳ ಮಾಡಿಕೊಂಡಿದ್ದ ಸಿರಿಶಾ ಮನೆ ಬಿಟ್ಟು ಹೋಗಿದ್ದಳು. ಅದಾದ ಕೆಲ ಹೊತ್ತಿನಲ್ಲೇ ಆಕೆ ಕೊಲೆಯಾಗಿ ಹೋಗಿದ್ದಾಳೆ. ದುಷ್ಕರ್ಮಿಗಳು ಆಕೆಯನ್ನು ಕೊಂದು ರಾಡ್‌ನಿಂದ ಕಣ್ಣುಗುಡ್ಡೆಗಳನ್ನು ಕಿತ್ತು ದೇಹವನ್ನು ನೀರಿನ ಹೊಂಡಕ್ಕೆ ಹಾಕಿ ಹೋಗಿದ್ದಾರೆ. ಹರಿತವಾದ ಚಾಕುವಿನಿಂದ ದೇಹವನ್ನು ಇರಿಯಲಾಗಿದೆ.

ಭಾನುವಾರ ನೀರಿನ ಹೊಂಡದಲ್ಲಿ ಸಿರಿಶಾ ಮೃತದೇಹ ಪತ್ತೆಯಾಗಿದೆ. ಸಿರಿಶಾ ಅವರ ತಾಯಿ ಹೃದಯಘಾತದಿಂದ ಆಸ್ಪತ್ರೆ ಸೇರಿದ್ದರು. ಹೀಗಾಗಿ ಆಕೆ ಕಳೆದ ಎರಡು ತಿಂಗಳಿಂದ ಕಾಲೇಜಿಗೆ ಹೋಗಿರಲಿಲ್ಲ. ಈ ನಡುವೆ ಸೋದರ ಮಾವನ ಜೊತೆಯೂ ಆಕೆ ಗಲಾಟೆ ಮಾಡಿಕೊಂಡಿದ್ದಳು. ಇದೇ ಕಾರಣಕ್ಕೆ ಆಕೆ ಬಿಟ್ಟು ಹೋಗಿದ್ದಳು. ಈಗ ಸಿರಿಶಾ ಕೊಲೆಯಾಗಿದ್ದಾಳೆ. ಪೊಲೀಸರು ಇದರ ಹಿಂದಿರುವವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Share Post