BengaluruCrime

ಇನ್ಸ್ ಪೆಕ್ಟರ್, ಎಸಿಪಿಗೇ ಕೊಲೆ ಬೆದರಿಕೆ ಹಾಕಿದ ಪೊಲೀಸ್ ಪೇದೆ

ಬೆಂಗಳೂರು; ಪೊಲೀಸ್ ಪೇದೆಯೊಬ್ಬರು ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಎಸಿಪಿಗೆ ಬೆದರಿಕೆ ಹಾಕಿದ್ದಾರೆ.. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆ ಅಮಾನತಿಗೆ ಶಿಫಾರಸು ಮಾಡಲಾಗಿತ್ತು.. ಇದರಿಂದರಿಂದ ಕೆರಳಿದೆ ಪೇದೆ ಬೆದರಿಕೆ ಹಾಕಿದ್ದಾರೆ..

  ಬಾಣಸವಾಡಿ ಠಾಣೆ ಇನ್ಸ್ ಪೆಕ್ಟರ್ ಹಾಗೂ ಎಸಿಪಿಗೆ ಪೇದೆ ರೇಣುಕಾ ನಾಯಕ್ ಬೆದರಿಕೆ ಹಾಕಿದ್ದಾನೆ.. ಇತ್ತೀಚೆಗೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾಗಿತ್ತು.. ರೌಡಿ ಶೀಟರ್ ಕಾರ್ತಿಕೇಯನ್ ಹತ್ಯೆ ನಡೆದಿತ್ತು.

 ಈ ಕೃತ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಪೊಲೀಸ್​ ಪೇದೆಗಳಾದ ಸಂತೋಷ್, ಪುಟ್ಟಸ್ವಾಮಿ, ವಿನೋದ್​ ಅವರನ್ನು ಪೂರ್ವವಿಭಾಗದ ಡಿಸಿಪಿ ಕುಲದೀಪ್​ ಕುಮಾರ್ ಆರ್​. ಜೈನ್​ ಅಮಾನತುಗೊಳಿಸಿದ್ದರು. ಜೊತೆಗೆ ರೇಣುಕಾ‌ನಾಯಕ್ ಅವರ ಅಮಾನತಿಗೂ ಶಿಫಾರಸು ಮಾಡಲಾಗಿತ್ತು.. ಹೀಗಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ..

Share Post