BengaluruCrime

ಸ್ನೇಹಿತನನ್ನು ಕಟ್ಟಡದ ಮೇಲಿಂದ ತಳ್ಳಿ ಭೀಕರ ಕೊಲೆ!

ಬೆಂಗಳೂರು; ಕುಡಿದ ಅಮಲಿನಲ್ಲಿ ಕಟ್ಟಡದ ಮೇಲಿಂದ ಸ್ನೇಹಿತನನ್ನು ತಳ್ಳಿ ಕೊಲೆ ಮಾಡಲಾಗಿದೆ.. ಕಳೆದ ರಾತ್ರಿ ಬೆಂಗಳೂರಿನ ತಲಘಟ್ಟಪುರದ ಅಂಜನಾಪುರದಲ್ಲಿ ನಡೆದಿದೆ.. ವಿಶಾಲ್ ಯಾದವ್ ಎಂಬಾತನೇ ಕೊಲೆಯಾದ ವ್ಯಕ್ತಿ.

   ವಿಶಾಲ್ ಸ್ನೇಹಿತ ಅಭಿಷೇಕ್ ಈ ಕೊಲೆ ಮಾಡಿದ್ದಾನೆ. ಇಬ್ಬರೂ ಉತ್ತರ ಪ್ರದೇಶದವರಾಗಿದ್ದು, ಕಟ್ಟಡ ಕಟ್ಟುವ ಕೂಲಿ ಕೆಲಸ ಮಾಡುತ್ತಿದ್ದರು.

   ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದು ಇಬ್ಬರೂ ಎಣ್ಣೆ ಪಾರ್ಟಿ ಮಾಡಿದ್ದು, ಇದೇ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಅಭಿಷೇಕ್​​ ವಿಶಾಲ್​ ಯಾದವ್​ನನ್ನು ಕಟ್ಟಡ ಮೇಲಿಂದ ತಳ್ಳಿ ಕೊಂದು ಎಸ್ಕೇಪ್​ ಆಗಿದ್ದಾನೆ.

Share Post