CrimeNational

ನಿಂತಿದ್ದ ಬಸ್‌ ಮೇಲೆ ಉರುಳಿದ ಕಲ್ಲು ತುಂಬಿದ್ದ ಟ್ರಕ್‌; 11 ಮಂದಿ ದುರ್ಮರಣ!

ಲಕ್ನೋ; ಸಾವು ಯಾವ ರೂಪದಲ್ಲಿ ಬರುತ್ತದೋ ಗೊತ್ತೇ ಆಗೋದಿಲ್ಲ.. ಇಲ್ಲಿ ಬಸ್ಸೊಂದು ಡಾಬಾ ಬಳಿ ಊಟಕ್ಕೆಂದು ನಿಲ್ಲಿಸಲಾಗಿತ್ತು.. ಇದೇ ವೇಳೆ ಅತಿವೇಗವಾಗಿ ಬಂದ ಕಲ್ಲು ತುಂಬಿದ್ದ ಟ್ರಕ್‌ ಒಂದು ಬಸ್‌ಗೆ ಡಿಕ್ಕಿ ಹೊಡೆದಿದ್ದು, ಅದರ ಮೇಲೆ ಉರಳಿಬಿದ್ದಿದೆ.. ಇದರಿಂದಾಗಿ ಬಸ್‌ನಲ್ಲಿದ್ದ 11 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ದುರಂತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.. ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಖುತಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ದುರಂತ ನಡೆದಿದೆ..

ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಈ ದುರಂತ ನಡೆದಿದೆ.. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಜೇಥಾ ಗ್ರಾಮದ ನಿವಾಸಿಗಳು ಬಸ್‌ನಲ್ಲಿ ಉತ್ತರಾಖಂಡದಲ್ಲಿನ ಪೂರ್ಣಗಿರಿಗೆ ತೆರಳುತ್ತಿದ್ದರು.. ರಾತ್ರಿ 11 ಗಂಟೆ ಸುಮಾರಿಗೆ ಊಟಕ್ಕೆಓಮದು ಹೆದ್ದಾರಿಯ ಡಾಬಾ ಒಂದರ ಬಳಿ ನಿಲ್ಲಿಸಲಾಗಿತ್ತು.. ಬಸ್‌ನಲ್ಲಿದ್ದ ಕೆಲವರು ಮಾತ್ರ ಊಟಕ್ಕೆ ತೆರಳಿದ್ದರು.. ಉಳಿದವರು ಬಸ್‌ನಲ್ಲೇ ಕುಳಿತಿದ್ದರು.. ಇದೇ ವೇಳೆ ಕಲ್ಲು ತುಂಬಿದ್ದ ಡ್ರಕ್‌ ಒಂದು ಅತಿವೇಗವಾಗಿ ಬಂದು ಡಿಕ್ಕಿ ಹೊಡೆದು ಅದರ ಮೇಲೆ ಬಿದ್ದಿದೆ..

ಮೃತರೆಲ್ಲರೂ ಜೇಥಾ ಗ್ರಾಮದವರೇ ಎಂದು ತಿಳಿದುಬಂದಿದೆ.. ಘಟನೆಯಲ್ಲಿ ಇನ್ನೂ ಹತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

 

Share Post