CrimeDistricts

ತಡರಾತ್ರಿ ಬಂದು ಊಟ ಕೇಳಿದ್ರು; ಇಲ್ಲ ಎಂದಿದ್ದಕ್ಕೆ ಹೋಟೆಲ್‌ಗೇ ಬೆಂಕಿ ಇಟ್ಟರು..!

ಕೊಪ್ಪಳ; ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಅಪರಿಚಿತರ ಗುಂಪೊಂದು ತಡರಾತ್ರಿ ಹೋಟೆಲ್‌ಗೆ ಬಂದಿದ್ದು, ಅಲ್ಲಿ ಊಟ ಕೇಳಿದ್ದಾರೆ. ಆದ್ರೆ ಹೋಟೆಲ್‌ನವರು ಇಷ್ಟು ಹೊತ್ತಲ್ಲಿ ಊಟ ಸಿಗುವುದಿಲ್ಲ ಎಂದಿದ್ದಕ್ಕೆ ಕುಪಿತಗೊಂಡು ಇಡೀ ಹೋಟೆಲ್‌ಗೇ ಬೆಂಕಿ ಹಚ್ಚಿರುವ ಘಟನೆ ಕಳೆದ ರಾತ್ರಿ ನಡೆದಿದೆ.

 

ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿರುವ ಹೋಟೆಲ್‌ಗೆ ಕಳೆದ ರಾತ್ರಿ ಹನ್ನೊಂದೂವರೆ ಸುಮಾರಿಗೆ ಬಂದಿದ್ದಾರೆ. ಊಟ ಕೊಡುವಂತೆ ಕೇಳಿದ್ದಾರೆ. ಆದ್ರೆ ಹೋಟೆಲ್‌ನವರು ಹೋಟೆಲ್‌ ಮುಚ್ಚಲಾಗಿದೆ. ಇಷ್ಟು ಹೊತ್ತಲ್ಲಿ ಊಟ ಕೊಡಲಾಗುವುದಿಲ್ಲ ಎಂದಿದ್ದಕ್ಕೆ ಅಪರಿಚಿತರು ಅಸಮಾಧಾನಗೊಂಡಿದ್ದಾರೆ.  ಅಡುಗೆ ಸಿಬ್ಬಂದಿಗೆ ಗೊತ್ತಾಗದಂತೆ ಕಿಡಿಗೇಡಿಗಳು ಕೋಣೆಯ ಹೊರಗಿನಿಂದ ಚಿಲಕ ಹಾಕಿ ಕೂಡಿಹಾಕಿದ್ದಾರೆ. ಬಳಿಕ ಹೋಟೆಲ್​ಗಿದ್ದ ನೀರಿನ ಸಂಪರ್ಕ ಕಡಿತಗೊಳಿಸಿ ಬೆಂಕಿ ಹಚ್ಚಿದ್ದಾರೆ. ಇದರಿಂದ ಗುಡಿಸಲು ಮಾದರಿಯಲ್ಲಿದ್ದ ಮಂಗಳೂರು ಹೆಂಚಿನ ಹೊದಿಕೆಯ ಒಟ್ಟು 11 ಕೊಠಡಿಗಳು ಬೆಂಕಿಗೆ ಆಹುತಿಯಾಗಿವೆ.

ಅಡುಗೆ ಕೋಣೆಯಲ್ಲಿ ಬಂಧಿಗಳಾಗಿದ್ದ ಸಿಬ್ಬಂದಿ, ಫೋನ್‌ ಮಾಡಿ ಆನೆಗೊಂದಿ ಗ್ರಾಮಸ್ಥರನ್ನು ಸ್ಥಳಕ್ಕೆ ಕರೆಸಿದ್ದಾರೆ. ಗ್ರಾಮದಿಂದ ಜನರು ಸಕಾಲಕ್ಕೆ ಬಂದಿದ್ದರಿಂದ ಅಡುಗೆ ಸಿಬ್ಬಂದಿಯ ಪ್ರಾಣ ಉಳಿದಿದೆ. ಬೆಂಕಿ ಹಚ್ಚಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

 

Share Post