Crime

ಶಿವಾಜಿ ಪ್ರತಿಮೆ ವಿರೂಪಗೊಳಿಸಿದ ಆರೋಪ: ದೇಶದ್ರೋಹ ಪ್ರಕರಣ ದಾಖಲಿಸಲು ಮನವಿ

ಪುಣೆ: ಬೆಂಗಳೂರಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ವಿರೂಪಗೊಳಿಸಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಸಲಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮಾಹಾರಾಷ್ಟ್ರದ ಶಿವಸೇನೆ ಸದಸ್ಯರು ಮನವಿ ಮಾಡಿದ್ದಾರೆ. ಎಂಇಎಸ್‌ ನಗರ ಅಧ್ಯಕ್ಷ ಸಂಜಯ್‌ ಮೋರೆ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿದ್ರು. ಇಂದು ಪುಣೆಯಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಶಂಕುಸ್ಥಾಪನೆ ಕಾರ್ಯಕ್ರಮ ಇದೆ. ಶಂಕುಸ್ಥಾಪನೆಗಾಗಿ ಬಂದ ಅಮಿತ್‌ ಶಾ ಅವರನ್ನು ಎಂಇಎಸ್‌ ನಾಯಕರು ಭೇಟಿ ಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸಿಎಂ ಬೊಮ್ಮಾಯಿಯವರು ಇಂತಹ ಸಣ್ಣ ಘಟನೆಗಳನ್ನು ದೊಡ್ಡದು ಮಾಡದಂತೆ, ಹೆಚ್ಚಿನ ಮಹತ್ವ ನೀಡದಂತೆ ಮನವಿ ಮಾಡಿದ್ದ ಮಾಡಿದ್ರು. ಈ ಮಾತಿಗೆ ಟಾಂಗ್‌ ಕೊಟ್ಟಿರುವ ಶಿವಸೇನೆ ನಾಯಕರು ಬೊಮ್ಮಾಯಿಯವರು ತಮ್ಮ ಹೇಳಿಕೆಯನ್ನು ನಿಯಂತ್ರಿಸಬೇಕೆಂದು ಉದ್ಧಟತನವಾಗಿ ಮಾತಾಡಿದ್ದಾರೆ. ನಿಮ್ಮ ರಾಜ್ಯದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ವಿರೂಪಗೊಳಿಸಿರುವುದು ಖಂಡನೀಯ ಎಂದಿದ್ದಾರೆ. ಇನ್ನು ಎಂಇಎಸ್‌ ಪುಂಡಾಟಿಕೆ ವಿರುದ್ಧ ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ರೊಚಿಗೆದ್ದಿದ್ದಾರೆ. ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿರುವುದಕ್ಕೆ ತಕ್ಕ ಶಿಕ್ಷೆಯಾಗಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.

Share Post