CrimeNational

ಪಟಾಕಿ ಗೋದಾಮಿನಲ್ಲಿ ಭಾರಿ ಬೆಂಕಿ ದುರಂತ; 9 ಮಂದಿ ದುರ್ಮರಣ

ಚೆನ್ನೈ; ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದಂತೆ ತಮಿಳುನಾಡಿನಲ್ಲಿ ಪಟಾಕಿ ತಯಾರಿಕೆ ಶುರುವಾಗುತ್ತದೆ. ಈ ವೇಳೆ ಅಜಾಗರೂಕತೆಯಿಂದ ದುರಂತಗಳೂ ನಡೆಯುತ್ತಿರುತ್ತವೆ. ಈ ಬಾರಿಯೂ ಅಂತಹದ್ದೇ ಒಂದು ದುರಂತ ನಡೆದುಹೋಗಿದೆ. ಬೆಂಕಿ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಹದಿನೈದಕ್ಕೂ ಹೆಚ್ಚು ಮಂದಿ ಸುಟ್ಟು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಕೃಷ್ಣಗಿರಿ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ. ಸ್ಫೋಟ ಸಂಭವಿಸಿದ್ದರಿಂದ ಪಟಾಕಿ ಗೋದಾಮಿನ ಮಾಲೀಕ ರವಿ, ಪತ್ನಿ ಜಯಶ್ರೀ, ಪುತ್ರ ರುತೀಶ್‌ ಹಾಗೂ ಪುತ್ರಿ ಋತಿಕ ಸಾವನ್ನಪ್ಪಿದ್ದಾರೆ. ಇನ್ನು ಈ ಪಟಾಕಿ ಗೋದಾಮಿನ ಬಳಿಯೇ ಇದ್ದ ರೆಸ್ಟೊರೆಂಟ್‌ ಮಾಲೀಕರಾದ ರಾಜೇಶ್ವರಿ, ವೆಲ್ಡಿಂಗ್‌ ಶಾಪ್‌ನ ಇಬ್ರಾಹಿಂ, ವಾಟರ್‌ ಕಂಪನಿಗೆ ಜೇಮ್ಸ್‌ ಮತ್ತು ಸರಸು ಕೂಡಾ ಸಾವನ್ನಪ್ಪಿದ್ದಾರೆ.

ಸ್ಫೋಟದ ಹಿನ್ನೆಲೆಯಲ್ಲಿ ಕಟ್ಟಡ ಕುಸಿದಿದೆ. ಕಟ್ಟಡದ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ಇದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ.

 

Share Post