CrimeDistricts

ವಿವಾಹಿತ ಮಹಿಳಾ ಎಂಜಿನಿಯರ್‌ ಆತ್ಮಹತ್ಯೆ!; ಸಾವಿಗೆ ಪತಿ, ಮೈದುನ ಕಾರಣ?

ವಿಜಯನಗರ; 22 ವರ್ಷ ಮಹಿಳಾ ಟೆಕ್ಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ತೆಗ್ಗಿ ಬಸಾಪುರ ಮೂಲದ ಟೆಕ್ಕಿ ಪೂಜಾ ಸಾವನ್ನಪ್ಪಿದವರು.. ವಿಜಯನಗರದ ಗಂಗಮ್ಮನ ಗುಡಿ ಮುಖ್ಯ ರಸೆಯಲ್ಲಿನ ಮನೆಯಲ್ಲಿ ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

ಪೂಜಾ ಆತ್ಮಹತ್ಯೆಗೆ ಪತಿ ಸುನಿಲ್‌ ಹಾಗೂ ಆತನ ಮೈದುನ ಅನಿಲ್‌ ಕಾರಣ ಎಂದು ಯುವತಿಯ ಪೋಷಕರು ಆರೋಪ ಮಾಡುತ್ತಿದ್ದಾರೆ.. ಎರಡು ವರ್ಷಗಳ ಹಿಂದಷ್ಟೇ ಪೂಜಾ ಅವರು ಸುನಿಲ್‌ ಅವರನ್ನು ಮದುವೆಯಾಗಿದ್ದರು.. ಎರಡು ವರ್ಷ ಪೂರ್ತಿಯಾಗುವ ಮೊದಲೇ ಈ ಘಟನೆ ನಡೆದಿದೆ.. ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಪೂಜಾ ಮೃತದೇಹ ರವಾನಿಸಲಾಗಿದೆ. ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Share Post