BengaluruCrime

ಯುವಕನಿಗೆ ಲಿಂಗಪರಿವರ್ತನೆ ಮಾಡಿ ಭಿಕ್ಷಾಟನೆಗೆ ದೂಡಿದ ಮಂಗಳಮುಖಿಯರು!

ಬೆಂಗಳೂರು; ಟೀ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಆತನ ಲಿಂಗಪರಿವರ್ತನೆ ಮಾಡಿ ಭಿಕ್ಷಾಟನೆ ದೂಡಿರುವ ಘಟನೆ ನಡೆದಿದೆ.. ಐವರು ಮಂಗಳಮುಖಿಯರ ವಿರುದ್ಧ ಯುವಕ ಆರೋಪ ಮಾಡಿದ್ದಾನೆ.. ಅವರಿಂದ ತಪ್ಪಿಸಿಕೊಂಡು ಬಂದಿರುವ ಆತ, ಪೊಲೀಸರಿಗೆ ದೂರು ಕೊಟ್ಟಿದ್ಧಾನೆ..

ಇದನ್ನೂ ಓದಿ; ಮೋದಿಗೆ 75 ವರ್ಷವಾಗ್ತಿದೆ; ಬದಲಾಗ್ತಾರಾ ಪ್ರಧಾನಿ..?

ಅಂಬೇಡ್ಕರ್‌ ಕಾಲೇಜು ಬಳಿ ಟೀ ಅಂಗಡಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದನಂತೆ.. ಈ ವೇಳೆ ಅಲ್ಲಿಗೆ ಬರುತ್ತಿದ್ದ ಮಂಗಳಮುಖಿಯರಾದ ಚಿತ್ರಾ, ಪ್ರೀತಿ, ಕಾಜಲ್, ಅಶ್ವಿನಿ, ಮುಗಿಲಿ ಎಂಬುವವರು ಆತನಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ಕರೆದುಕೊಂಡು ಹೋಗಿದ್ದರಂತೆ.. ನಂತರ ಏನೋ ಇಂಜೆಕ್ಷನ್‌ ಕೊಟ್ಟು ಹುಡುಗಿ ಬಟ್ಟೆ ಹಾಕಿಸಿ ಭಿಕ್ಷಾಟನೆ ಮಾಡಿಸುತ್ತಿದ್ದರಂತೆ.. ಕೆಲ ತಿಂಗಳ ಬಳಿ ಬಲವಂತವಾಗಿ ಲಿಂಗಪರಿವರ್ತನೆ ಮಾಡಿಸಿದ್ದಾರೆ ಎಂದು ಯುವಕ ಆರೋಪ ಮಾಡಿದ್ದಾರೆ.
ನಾನು ವಿರೋಧಿಸಿದ್ದಕ್ಕೆ ದೈಹಿಕವಾಗಿ ಹಲ್ಲೆ ಮಾಡಲಾಗಿದೆ. ಮಾನಸಿಕವಾಗಿ ಹಿಂಸಿಸಲಾಗಿದೆ ಎಂದು ಯುವಕ ಆರೋಪ ಮಾಡಿದ್ದು, ಈ ಬಗ್ಗೆ ಎಫ್‌ಐಆರ್‌ ಕೂಡಾ ದಾಖಲಾಗಿದೆ. ಫ್ರೇಜರ್‌ ಟೌನ್‌ ನಲ್ಲಿ ಈ ಮಂಗಳಮುಖಿಯರು ವಾಸವಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ರಾಖಿ ಹಬ್ಬಕ್ಕೆ ತವರಿಗೆ ಹೋಗ್ತೀನೆಂದ ಪತ್ನಿ; ಮೂಗು ಕತ್ತರಿಸಿದ ಪತಿ!

Share Post