CrimeNational

ಕುಟುಂಬದವರನ್ನೆಲ್ಲಾ ಕೊಂದು ತಾನೂ ಆತ್ಮಹತ್ಯೆ

ಜೈಪುರ; ತಂದೆ, ತಾಯಿ ಹಾಗೂ ಇಬ್ಬರು ಮಕ್ಕಳನ್ನು ಕೊಂದ ವ್ಯಕ್ತಿ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ. ಶಂಕರ್‌ ಲಾಲ್‌ ಎಂಬಾತನೇ ಈ ಕೃತ್ಯ ಎಸಗಿರುವಾತ. 

ಶಂಕರ್‌ ಲಾಲ್‌ ತಂದೆ ಸೋನಾರಾಮ್ (65)  ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕೊಡಲಿಯಿಂದ ಅವರನ್ನು ಕೊಚ್ಚಿಕೊಂದಿದ್ದಾನೆ. ಅನಂತರ ಚಂಪಾ (55), ಮಕ್ಕಳಾದ ಲಕ್ಷ್ಮಣ್ (14), ಮತ್ತು ದಿನೇಶ್ (8)ನನ್ನು ಕೂಡಾ ಕೊಂದಿದ್ದಾರೆ.

ನಾಲ್ಕೂ ದೇಹಗಳನ್ನು ನೀರಿನ ಟ್ಯಾಂಕ್‌ಗೆ ಎಸೆದಿದ್ದಾನೆ. ಅನಂತರ ಸಂಬಂಧಿಕರ ಮನೆಗೆ ತೆರಳಿದ ಆರೋಪಿ ತಾನೂ ಅಲ್ಲಿನ ಟ್ಯಾಂಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

Share Post