BengaluruCrime

ಕಬಾಬ್‌ ವಿಚಾರಕ್ಕೆ ಜಗಳ; ಆಸ್ಪತ್ರೆ ಸೇರಿದ ಪತ್ನಿ, ಪತಿ ನೇಣಿಗೆ ಶರಣು..!

ಬೆಂಗಳೂರು; ಕಬಾಬ್‌ ರುಚಿಯಿಲ್ಲವೆಂದು ಜಗಳ ತೆಗೆದ ಪತಿಯೊಬ್ಬ, ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಹೋಗಿ ಮರವೊಂದರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ನಡೆದಿದೆ.

ಸುರೇಶ್‌ ಎಂನಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ನಿನ್ನೆ ಮನೆಯಲ್ಲಿ ಪತ್ನಿ ಮಾಡಿದ ಕಬಾಬ್‌ ರುಚಿಯಿಲ್ಲವೆಂದು ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಪತ್ನಿ ಶಾಲಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ತೀವ್ರ ಅಸ್ವಸ್ಥಳಾಗಿರುವ ಶಾಲಿನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ಸುರೇಶ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಕೇಸ್‌ ಕೂಡಾ ದಾಖಲಿಸಿದ್ದಾರೆ.

ಪತ್ನಿ ಕೇಸ್‌ ದಾಖಲಿಸಿರುವುದನ್ನು ತಿಳಿದ ಸುರೇಶ್‌ ಬನ್ನೇರುಘಟ್ಟದ ನಿರ್ಜನ ಪ್ರದೇಶಕ್ಕೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post