CrimeNational

ಎರಡು ಗುಂಪುಗಳ ನಡುವೆ ಮಾರಾಮಾರಿ; ಓರ್ವನ ಹತ್ಯೆ

ಕೊಚ್ಚಿ; ಫೇಸ್​ಬುಕ್​ನಲ್ಲಿ ಆಕ್ಷೇಪಾರ್ಹ ಪೋಸ್ಟ್​ ಹಾಕಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗುಂಪೊಂದು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    ಕೊಚ್ಚಿಯ ಸಜ್ಜನ್ ಎಂಬಾತನೇ​ ಕೊಲೆಯಾದ ವ್ಯಕ್ತಿ. ಎರಡು ಗುಂಪುಗಳ ಮಧ್ಯೆ ಈ ಹಿಂದೆಯೇ ಯಾವುದೋ ಕಾರಣಕ್ಕಾಗಿ ಹಳೆಯ ದ್ವೇಷ ಹೊಗೆಯಾಡುತ್ತಿತ್ತು. ಈ ಮಧ್ಯೆ ಸಜ್ಜನ್​ ಫೇಸ್​ಬುಕ್​ನಲ್ಲಿ ಆಕ್ಷೇಪಾರ್ಹ ಬರಹವುಳ್ಳ ಪೋಸ್ಟ್​ ಮಾಡಿದ್ದ. ಇದನ್ನು ಪ್ರಶ್ನಿಸಲು ಆಂಟೋನಿ ಮತ್ತು ಆತನ ಗ್ಯಾಂಗ್​ ಸಜ್ಜನ್​ ಮನೆಗೆ ಬಂದಿದೆ.

   ಪೋಸ್ಟ್​ ಬಗ್ಗೆ ವಾಗ್ವಾದ ನಡೆದಿದೆ. ಈ ವೇಳೆ, ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಸಜ್ಜನ್​ಗೆ ಮತ್ತೊಂದು ಗುಂಪು ಚಾಕುವಿನಿಂದ ಇರಿದಿದೆ. ತೀವ್ರ ರಕ್ತಸ್ರಾವದಿಂದ ಸಜ್ಜನ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಲ್ಲದೇ, ಎರಡೂ ಗ್ಯಾಂಗ್​ನ ಸದಸ್ಯರಿಗೆ ಗಾಯಗಳಾಗಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

Share Post