BengaluruCrime

ಚರಂಡಿಯಲ್ಲಿ 30 ಮಂದಿ; ವ್ಯಕ್ತಿ ಹೇಳಿಕೆಗೆ ಬೆಚ್ಚಿಬಿದ್ದ ಜನ..!

ಬೆಂಗಳೂರು; ಮಾನಸಿಕ ಅಸ್ವಸ್ಥನಂತೆ ಕಂಡ ವ್ಯಕ್ತಿಯೊಬ್ಬ ಅಗ್ನಿಶಾಮಕ ಸಿಬ್ಬಂದಿ ಪೀಕಲಾಟ ತಂದಿಟ್ಟ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಚರಂಡಿಯೊಂದರಿಂದ ಎದ್ದುಬಂದಿದ್ದ ಆತ, ಸ್ಥಳೀಯರಿಗೆ ಚರಂಡಿಯಲ್ಲಿ ಇನ್ನೂ ಮೂವತ್ತು ಮಂದಿ ಸಿಲುಕಿದ್ದಾರೆ ಎಂದು ಹೇಳಿದ್ದ. ಇದ್ರಿಂದ ಗಾಬರಿಗೊಂಡ ಜನ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸಮೇತವಾಗಿ ಆಗಮಿಸಿ ಚರಂಡಿಯಲ್ಲಿ ಪರಿಶೀಲನೆ ನಡೆಸಿದರು. ಆದ್ರೆ ಅಲ್ಲಿ ಯಾರೂ ಕಂಡುಬರಲಿಲ್ಲ. ಇದ್ರಿಂದ ನಿಟ್ಟುಸಿರು ಬಿಡಬೇಕಾಯಿತು. ಆ ವ್ಯಕ್ತಿ ಶ್ರೀರಾಮಪುರದಿಂದ ಚರಂಡಿಯೊಳಗೇ ಬಂದಿದ್ದೇನೆ. ಚರಂಡಿಯಲ್ಲಿ ಇನ್ನೂ ಸುಮಾರು 30 ಮಂದಿ ಇದ್ದಾರೆ ಎಂದು ಹೇಳಿದ್ದ. ಇದ್ರಿಂದ ಪೊಲೀಸರು ಕೂಡಾ ಗಾಬರಿಗೊಳಗಾಗಿದ್ದರು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Share Post