CrimeDistricts

ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ!; ಕಾರಣ ಏನು..?

ಗದಗ; ಗದಗದಲ್ಲಿ ತಡರಾತ್ರಿ ಭೀಕರ ಘಟನೆ ನಡೆದಿದೆ. ಇಲ್ಲಿನ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಅವರ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಗದಗದ ನಗರದ ದಾಸರ ಓಣಿಯಲ್ಲಿ ಈ ಕೃತ್ಯ ನಡೆದಿದ್ದು, ದುಷ್ಕರ್ಮಿಗಳ ಎಸ್ಕೇಪ್‌ ಆಗಿದ್ದಾರೆ..

ಇದನ್ನೂ ಓದಿ; ಸಿದ್ದರಾಮಯ್ಯ ಸೀಟು ಅಲುಗಾಡುತ್ತಿದೆಯಾ..?; ಸಿಎಂ ಶಿಷ್ಯನೇ ಹೀಗೆ ಹೇಳಿದ್ಯಾಕೆ..?

ಮನೆಗೆ ಸಂಬಂಧಿಗಳನ್ನೂ ಕೊಂದರು;

ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ (27) ಅವರ ಸಂಬಂಧಿಗಳಾದ ಪರಶುರಾಮ (55), ಅವರ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾಗಿದ್ದಾರೆ.. ಎಲ್ಲರನ್ನೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.. ಕೊಲೆಯಾಗಿರುವ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್​  ಮದುವೆ ತಯಾರಿ ನಡೆಯುತ್ತಿತ್ತು.. ಈ ಹಿನ್ನೆಲೆಯಲ್ಲಿ ಏಪ್ರಿಲ್​ 17 ರಂದು ಅವರ ಸಂಬಂಧಿಕರಾದ ಪರಶುರಾಮ, ಪತ್ನಿ ಲಕ್ಷ್ಮೀ, ಪುತ್ರಿ ಆಕಾಂಕ್ಷಾ ಕೊಪ್ಪಳದಿಂದ ಬಂದಿದ್ದರು.. ನಂತರ ನಿನ್ನೆ ಸಂಜೆ ಪರಶುರಾಮ ಅವರು ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಗದಗದಲ್ಲೇ ಆಚರಿಸಿದ್ದಾರೆ.. ಅನಂತರ ಮೊದಲನೆ ಮಹಡಿಯಲ್ಲಿ ಎಲ್ಲರೂ ಮಲಗಿದ್ದರು. ಈ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಈ ದುಷ್ಕೃತ್ಯ ಎಸಗಿದ್ದಾರೆ..

ಇದನ್ನೂ ಓದಿ; ಸುಮಲತಾ ಸೈಲೆನ್ಸ್, ದರ್ಶನ್ ಕಾಂಗ್ರೆಸ್ ಸಪೋರ್ಟ್ ಕುಮಾರಸ್ವಾಮಿಗೆ ಮುಳುವಾಗುತ್ತಾ..?

ಕಿಟಕಿ ಗಾಜು ಒಡೆದು ಒಳ್ಳನುಗ್ಗಿದ ದುಷ್ಕರ್ಮಿಗಳು;

ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗೂ ಕೋಣೆಯ ಕಿಟಕಿ ಗಾಜು ಒಡೆದು ಒಳ ನುಗ್ಗಿದ್ದಾರೆ.. ಏಕಾಏಕಿ ಮಾರಕಾಸ್ತ್ರಗಳನ್ನು ಹೊರತೆಗೆದು ಕೊಚ್ಚಿ ಕೊಂಡಿದ್ದಾರೆ.. ಪರಶುರಾಮ ಅವರು ಕಿರುಚಾಡಿದ್ದನ್ನು ನೋಡಿ ಏನಾಯಿತೆಂದು ಕೆಳ ಮಹಡಿಯಲ್ಲಿ ಮಲಗಿದ್ದ ಕಾರ್ತೀಕ್‌ ಬಾಕಳೆ ಮೇಲೆ ಬಂದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಕಾರ್ತೀಕ್‌ನನ್ನು ಕೊಂದಿದ್ದಾರೆ..

ಇದನ್ನೂ ಓದಿ; ಮಾವು ನೈಸರ್ಗಿಕವಾಗಿ ಹಣ್ಣಾಗಿರುವುದಾ ಎಂದು ಪರೀಕ್ಷಿಸುವುದು ಹೇಗೆ?

ಪೊಲೀಸರಿಗೆ ಕಾಲ್‌ ಮಾಡಿದ ಉಪಾಧ್ಯಕ್ಷೆ;

ನಾಲ್ವರನ್ನು ಕೊಲೆ ಮಾಡಿದ ಬಳಿಕ ದುಷ್ಕರ್ಮಿಗಳು ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಹಾಗೂ ಅವರ ಪತಿ  ಪ್ರಕಾಶ್ ಬಾಕಳೆ ಅವರು ಮಲಗಿದ್ದ ಕೋಣೆಯ ಬಾಗಿಲನ್ನೂ ತಟ್ಟಿದ್ದಾರೆ ಎಂದು ತಿಳಿದುಬಂದಿದೆ.. ಈ ವೇಳೆ ದಂಪತಿ ಬಾಗಿಲು ತೆಗೆಯದೇ ಪೊಲೀಸರಿಗೆ ಕರೆ ಮಾಡಿದ್ದಾರೆ.. ಇದರಿಂದಾಗಿ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಚರಂಡಿಗೆ ಬಿಸಾಕಿ ಹೋಗಿದ್ದಾರೆ..

ಇದನ್ನೂ ಓದಿ; ಶ್ವಾಸಕೋಶ ಆರೋಗ್ಯವಾಗಿರಿಸಲು ಈ ಆಹಾರ ಸೇವಿಸಿ..

Share Post