BengaluruCrime

ತಮ್ಮ ದಂಡಪಿಂಡ ಎಂದು ಬೈದ!; ಅಣ್ಣ ತಮ್ಮನಿಗೇ ಪಿಂಡ ಇಟ್ಟ!

ಬೆಂಗಳೂರು; ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಇದ್ದೇ ಇರುತ್ತೆ.. ಒಮ್ಮೊಮ್ಮೆ ಹೊಡೆದಾಡಿಕೊಳ್ಳುವುದೂ ಇದೆ.. ಆದ್ರೆ ಪ್ರಾಣ ತೆಗೆದುಕೊಳ್ಳುವಷ್ಟು ಜಗಳವಾಡುವುದು ತುಂಬಾನೇ ಕಡಿಮೆ.. ಆದ್ರೆ ಇಲ್ಲೊಬ್ಬ ಯುವಕ ತನ್ನ ತಮ್ಮನನ್ನೇ ಕ್ಷುಲ್ಲಕ ಕಾರಣಕ್ಕೆ ಕೊಂದಿದ್ದಾನೆ.. ದಂಡಪಿಂಡ ಎಂದು ಕರೆದಿದ್ದಕ್ಕೆ ಅಣ್ಣನ ಮೇಲೆ ಚಾಕು ಎಸೆದು ಕೊಲೆ ಮಾಡಿದ್ದಾನೆ.. ಬೆಂಗಳೂರಿನ ಗಾರ್ವೆಬಾವಿ ಪಾಳ್ಯದ ಹೊಂಗಸಂದ್ರ ಬಳಿಯ ಲಕ್ಷ್ಮೀಪುರದಲ್ಲಿ ನಡೆದಿದೆ..

ಇದನ್ನೂ ಓದಿ; ಆಸ್ತಿ ಖರೀದಿಸುವ ಮುನ್ನ ಈ ದಾಖಲೆ ಪರಿಶೀಲಿಸಿ; ಇಲ್ಲದಿದ್ದರೆ ಟೋಪಿ!

ಲಕ್ಷ್ಮೀಪುರ ನಿವಾಸಿ 18 ವರ್ಷದ ಪ್ರಕಾಶ್‌ ಎಂಬಾತನೇ ಕೊಲೆಯಾದ ಯುವಕ.. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ತಾಯಿಯ ಎದುರೇ ರಜನಿ ಎಂಬ 28 ವರ್ಷದ ಅಣ್ಣ ತಮ್ಮನನ್ನು ಕೊಲೆ ಮಾಡಿದ್ದಾನೆ.. ರಜನಿ ಅನಾರೋಗ್ಯದ ಕಾರಣ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ.. ಮನೆಗೆ ಬಂದ ತಮ್ಮ ಅಣ್ಣನನ್ನು ನೋಡಿ ದಂಡಪಿಂಡ ಎಂದು ಕರೆದಿದ್ದಾನೆ.. ಇದ್ರಿಂದ ಜೋರು ಜಗಳ ಆಗಿದೆ.. ಇದೇ ವೇಳೆ ಅಣ್ಣ ರಜನಿ ಅಡುಗೆ ಮನೆಗೆ ಹೋಗಿ ಚಾಕು ತಂದು ತಮ್ಮನ ಮೇಲೆ ಎಸೆದಿದ್ದಾನೆ.. ಅದು ಪ್ರಕಾಶ್‌ ಎದೆಗೆ ಚುಚ್ಚಿಕೊಂಡು ತೀವ್ರ ರಕ್ತಸ್ರಾವವಾಗಿದೆ.. ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಪ್ರಕಾಶ್‌ ಸಾವನ್ನಪ್ಪಿದ್ದಾನೆ..
ಇತ್ತ ರಜನಿ ಘಟನೆ ನಂತರ ನಾಪತ್ತೆಯಾಗಿದ್ದ.. ಬೇಗೂರು ಪೊಲೀಸರು ಕೊನೆಗೂ ಆತನನ್ನು ಹಿಡಿದು ತಂದಿದ್ದಾರೆ..

ಇದನ್ನೂ ಓದಿ; ಇಲ್ಲಿ ಮಚ್ಚಿನಿಂದ ಮಾಡ್ತಾರೆ ಮಸಾಜ್‌!; ಕತ್ತಿ ಮಸಾಜ್‌ಗೆ ಭಾರಿ ಡಿಮ್ಯಾಂಡ್‌!

Share Post