BengaluruCrime

ವಂಶಿಕಾ ಹೆಸರಲ್ಲಿ ವಂಚನೆ; ಆರೋಪಿ ನಿಶಾ ವಿರುದ್ಧ ಇನ್ನೂ 20 ಕೇಸ್‌

ಬೆಂಗಳೂರು; ನಟ, ನಿರೂಪಕ ಮಾಸ್ಟರ್‌ ಆನಂದ್‌ ಅವರ ಪುತ್ರಿ ವಂಶಿಕಾ ಹೆಸರು ದುರುಪಯೋಗಪಡಿಸಿಕೊಂಡು ಹಲವರಿಗೆ ವಂಚನೆ ಆರೋಪದಡಿ ಈಗಾಗಲೇ ಆರೋಪಿ ನಿಶಾ ನರಸಪ್ಪ ಅವರನ್ನು ಬಂಧಿಸಲಾಗಿದೆ. ಅವರನ್ನು ಕೋರ್ಟ್‌ ನಿನ್ನೆ 14 ದಿನಗಳ ನ್ಯಾಯಾಂಗ ಬಂಧಕ್ಕೂ ಒಪ್ಪಿಸಿದೆ. ಈ ನಡುವೆ ನಿಶಾ ವಿರುದ್ಧ ದೂರುಗಳು ದಾಖಲಾಗುತ್ತಲೇ ಇವೆ. ಇಂದು ಒಂದೇ ದಿನ ನಿಶಾ ವಿರುದ್ಧ ಸುಮಾರು 20 ದೂರುಗಳು ದಾಖಲಾಗಿದೆ.

ಮಕ್ಕಳಿಗೆ ಫೋಟೋ ಶೂಟ್‌, ಆಲ್ಬಂ ಶೂಟ್‌ ಹಾಗೂ ಕಿರುತೆರೆಯಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಹಲವರಿಂದ ನಿಶಾ ಹಣ ಪಡೆದು ವಂಚನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ.

ಸದಾಶಿವನಗರ, ಯಲಹಂಕ ನ್ಯೂ ಟೌನ್‌, ಕೋಣನಕುಂಟೆ ಹಾಗೂ ಜ್ಞಾನಭಾರತಿ ಠಾಣೆಯಲ್ಲಿ ನಿಶಾ ವಿರುದ್ಧ ವಂಚನೆ ದೂರುಗಳು ದಾಖಲಾಗಿವೆ. ಸದಾಶಿವನಗರ ಠಾಣೆಯಲ್ಲಿ ಬರೋಬ್ಬರಿ 35 ಲಕ್ಷ ವಂಚನೆ ಮಾಡಿರುವ ಬಗ್ಗೆ ಕೇಸ್‌ ದಾಖಲಾಗಿದೆ.

Share Post