BengaluruCrimePolitics

ಮಾಜಿ ಕೇಂದ್ರ ಸಚಿವ ಜಾಲಪ್ಪ ಪುತ್ರನಿಗೆ 6 ತಿಂಗಳು ಜೈಲು

ಬೆಂಗಳೂರು; ಕೇಂದ್ರ ಸರ್ಕಾರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರ ಪುತ್ರ ನರಸಿಂಹಸ್ವಾಮಿ ಜೈಲು ಪಾಲಾಗಿದ್ದಾರೆ. ಚೆಕ್‌ಬೌನ್ಸ್‌ ಪ್ರಕರಣದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರಿಗೆ 6 ತಿಂಗಳು ಜೈಲು ಶಿಕ್ಷೆ, 20 ಲಕ್ಷ ರೂಪಾಯಿ ದಂಡ ವಿಧಿಸಿದೆ.

ನರಸಿಂಹಸ್ವಾಮಿಯರವು ಪ್ರಕಾಶ್‌ ಕುಮಾರ್‌ ಎಂಬುವವರ ಪುತ್ರಿಗೆ ಮೆಡಿಕಲ್‌ ಸೀಟ್‌ ಕೊಡಿಸೋದಾಗಿ 45 ಲಕ್ಷ ರೂಪಾಯಿ ಪಡೆದಿದ್ದರು. ಆದ್ರೆ ಆಕೆಗೆ ಸೀಟು ಸಿಕ್ಕಿರಲಿಲ್ಲ. ಹೀಗಾಗಿ 45 ಲಕ್ಷ ರೂಪಾಯಿ ಮೌಲ್ಯದ ಚೆಕ್‌ ನೀಡಿದ್ದರು. ನರಸಿಂಹಸ್ವಾಮಿಯವರು ನೀಡಿದ ಚೆಕ್‌ ಬೌನ್ಸ್‌ ಆಗಿತ್ತು. ಹೀಗಾಗಿ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಶಿಕ್ಷೆ ಪ್ರಮಾಣದ ಮೇಲ್ಮನವಿ ಸಲ್ಲಿಕೆಗೆ ಕೋರ್ಟ್‌ 2 ತಿಂಗಳು ಕಾಲಾವಕಾಶ ನೀಡಿದೆ.

Share Post