CrimeDistrictsHealth

ಹಾಸನ ಬಳಿ ರಣ ಭೀಕರ ಅಪಘಾತ; ಚಿಕ್ಕಬಳ್ಳಾಪುರದ 6 ಮಂದಿಯ ದೇಹ ಛಿದ್ರ ಛಿದ್ರ!

ಹಾಸನ; ಇಂದು ಮುಂಜಾನೆ ಹಾಸನ ಬಳಿ ರಣ ಭೀಕರ ಅಪಘಾತ ಸಂಭವಿಸಿದೆ.. ದುರಂತದಲ್ಲಿ ಆರು ಮಂದಿಯ ದೇಹಗಳು ಛಿದ್ರ ಛಿದ್ರವಾಗಿವೆ.. ಹಾಸನ ಹೊರವಲಯದ ಈಚನಹಳ್ಳಿ ಬಳಿ ಈ ಭೀಕರ ದುರಂತ ನಡೆದಿದೆ..

ಕಾರು ಹಾಗೂ ಟ್ರಕ್‌ ನಡುವೆ ಭೀಕರ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ.. ಮೂವರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಘಟನೆಯಲ್ಲಿ ಸಾವನ್ನಪ್ಪಿದೆ.. ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವುದರಿಂದ ಮೃತದೇಹಗಳು ಕಾರಿನಲ್ಲೇ ಛಿದ್ರ ಛಿದ್ರವಾಗಿವೆ..

ಕಾರಿನಲ್ಲಿದ್ದವರು ಚಿಕ್ಕಬಳ್ಳಾಪುರ ಮೂಲದವರಾಗಿದ್ದಾರೆ.. ಅವರು ಎಲ್ಲಿಗೆ ಹೋಗುತ್ತಿದ್ದರು..? ಘಟನೆ ಹೇಗೆ ನಡೆಯಿತು ಅನ್ನೋದು ಇನ್ನೂ ಗೊತ್ತಾಗಿಲ್ಲ.. ಹಾಸನ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

 

Share Post