CrimeNational

ತಮಿಳುನಾಡಿನಲ್ಲಿ ಭೀಕರ ಅಪಘಾತ; ಐದು ಮಂದಿ ದುರ್ಮರಣ

ಚೆನ್ನೈ; ಮಿಳುನಾಡಿನ ಧಾರಾಪುರಂ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐದು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಾರು ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ ಈ ದುರಂತ ನಡೆದಿದೆ. ಮದುವೆ ಸಮಾರಂಭ ಮುಗಿಸಿಕೊಂಡು ಕಾರಿನಲ್ಲಿ ವಾಪಸ್ಸಾಗುತ್ತಿದ್ದಾಗ ಟ್ಯಾಂಕರ್‌ ಗುದ್ದಿದ್ದು, ಡಿಕ್ಕಿ ರಭಸಕ್ಕೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ತ್ರಿಪುರ ಜಿಲ್ಲೆಯ ಧಾರಾಪುರಂನ ಮನಕಾಡು ಬಳಿ ಈ ದುರಂತ ನಡೆದಿದ್ದು, ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ವಾಹನ ಕೊಯಮತ್ತೂರಿನ ಇರುಗೂರು ಕಡೆ ಹೋಗುತ್ತಿತ್ತು. ಮೃತರನ್ನು ತಮಿಳ್ಮಣಿ (51), ಚಿತ್ರಾ (49), ಸೆಲ್ವರಾಣಿ (70), ಬಾಲಕೃಷ್ಣನ್ (78) ಹಾಗೂ ಕಲಾರಾಣಿ (50) ಎಂದು ಗುರುತಿಸಲಾಗಿದೆ.

 

Share Post