CrimeDistricts

ಬಸವನಬಾಗೇವಾಡಿಯಲ್ಲಿ ರಣಭೀಕರ ಅಪಘಾತ; ಮೂವರ ದುರ್ಮರಣ!

ವಿಜಯಪುರ; ಬಸವನಬಾಗೆವಾಡಿ ಬಳಿ ರಣಭೀಕರ ಅಪಘಾತ ನಡೆದಿದೆ.. ತಡರಾತ್ರಿ ಕುಡಿದು ಕಾರು ಚಲಾಯಿಸಿದ್ದು, ರಸ್ತೆ ಪಕ್ಕದ ಕಲ್ಲಿಗೆ ಕಾರು ಡಿಕ್ಕಿ ಹೊಡೆದಿದೆ.. ಇದರಿಂದಾಗಿ ಮೂರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಬಸವನಬಾಗೇವಾಡಿ ಹಾಗೂ ಇಂಗಳೇಶ್ವರ ಮಾರ್ಗ ಮಧ್ಯೆ ಈ ದುರಂತ ನಡೆದಿದೆ.. ಈ ಅಪಘಾತದ ದೃಶ್ಯ ಕಾರಿನಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದೆ..

ಇದನ್ನೂ ಓದಿ; ಇಬ್ಬರನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿ ತಂದು ಬಿಸಾಡಿದ್ದ!

ಕಾರಿನಲ್ಲಿ ಐದು ಮಂದಿ ಇದ್ದರು. ಇದರಲ್ಲಿ ಮಲ್ಲು ಡೋಲಗೊಂಡ (32), ಪರಶು ಮಿಣಜಿಗಿ (26) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ರೇವಣ್ಣಸಿದ್ದ ಶೆಕಣ್ಣಿ ಎಂಬ ಯುವಕ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.. ಜುಲೈ 8ರಂದು ಈ ದುರ್ಘಟನೆ ನಡೆದಿದ್ದು, ಇದೀಗ ವಿಡಿಯೋ ವೈರಲ್‌ ಆಗುತ್ತಿದೆ.. ಮೃತರೆಲ್ಲರೂ ಇಂಗಲೇಶ್ವರ ಗ್ರಾಮದವರಾಗಿದ್ದು, ಎಣ್ಣೆ ಪಾರ್ಟಿ ಮಾಡಿ, ಕಾರಿನಲ್ಲಿ ಹಾಡು ಹಾಕಿಕೊಂಡು ಪ್ರಯಾಣ ಮಾಡುತ್ತಿದ್ದರು.. ಈ ವೇಳೆ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ; ಡ್ರಗ್ಸ್‌ ಕೇಸ್‌ನಲ್ಲಿ ನಟಿ ರಕುಲ್‌ ಪ್ರೀತ್‌ಸಿಂಗ್‌ ಸಹೋದರ ಅರೆಸ್ಟ್‌!

Share Post