CrimeNational

ವಿಚ್ಛೇದನ ಅರ್ಜಿ ವಿಲೇವಾರಿ ವಿಳಂಬ; ಜಡ್ಜ್‌ ಕಾರು ಜಖಂಗೊಳಿಸಿದ ವ್ಯಕ್ತಿ

ಕೇರಳ; ವಿಚ್ಛೇದನ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡದಿದ್ದುದರಿಂದ ಅಸಮಾಧಾನಗೊಂಡ ವ್ಯಕ್ತಿಯೊಬ್ಬ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರೊಬ್ಬರ ಕಾರನ್ನೇ ಜಖಂಗೊಳಿಸಿರುವ ಘಟನೆ ಕೇರಳದ ಪಟ್ಟಣಂತಿಟ್ಟದ ತಿರುವಳ್ಳ ಬಳಿ ನಡೆದಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

55 ವರ್ಷದ ವ್ಯಕ್ತಿ ಕೇಸ್‌ ವಿಚಾರಣೆ ವಿಳಂಬವಾಗುತ್ತಿದ್ದಕ್ಕೆ ಆಕ್ರೋಶಗೊಂಡಿದ್ದನೆಂದು ತಿಳಿದುಬಂದಿದೆ. ಬುಧವಾರ ವಿಚಾರಣೆ ನಂತರ ಕೋರ್ಟ್‌ನಿಂದ ಹೊರಬಂದ ಆತ, ತಿರುವಳ್ಳ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿದ್ದ ನ್ಯಾಯಾಧೀಶರ ಕಾರಿನ ಮೇಲೆ ದಾಳಿ ಮಾಡಿದ್ದಾನೆ. ಕಾರಿನ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಹೆಂಡತಿ ಹಾಗೂ ನ್ಯಾಯಾಧೀಶರ ಮೇಲಿನ ಕೋಪಕ್ಕೆ ಸರ್ಕಾರಿ ಕಾರನ್ನು ಪುಡಿ ಮಾಡಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Share Post