BengaluruCrime

ಬೆಂಗಳೂರಿನಲ್ಲಿ ಲವ್‌ ಜಿಹಾದ್‌ ಪ್ರಕರಣ; ಅಪಾಯದಲ್ಲಿದ್ದೇವೆ ಅಂತ ಟ್ವೀಟ್‌ ಮಾಡಿದ ಯುವತಿ

ಬೆಂಗಳೂರು; ಬೆಂಗಳೂರಿನಲ್ಲಿ ಲವ್‌ ಜಿಹಾದ್‌ ನಡೆಸಿರುವ ಆರೋಪ ಕೇಳಿಬಂದಿದೆ. ಯುವತಿಯೊಬ್ಬಳು ಈ ಬಗ್ಗೆ ಟ್ವೀಟ್‌ ಮಾಡಿದ್ದಾಳೆ. ನಾನು ಲವ್‌ ಜಿಹಾದ್‌ ಬಲೆಯಲ್ಲಿ ಸಿಲುಕಿದ್ದು, ನನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ. ನಾನು ಅಪಾಯದಲ್ಲಿದ್ದು, ಕಾಪಾಡಬೇಕೆಂದು ಮನವಿ ಮಾಡಿದ್ದಾಳೆ. ಯುವತಿ ಟ್ವಿಟರ್‌ ಮೂಲಕ ತನ್ನ ಗೋಳು ತೋಡಿಕೊಂಡಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಟ್ಯಾಗ್‌ ಮಾಡಿದ್ದಾಳೆ.

ಫೇಸ್‌ಬುಕ್‌ ಮೂಲಕ ಕಾಶ್ಮೀರದ ಯುವಕನ ಪರಿಚಯವಾಗಿತು. ಅನಂತರ ಇಬ್ಬರ ನಡುವೆ ಹಣಕಾಸನ ವ್ಯವಹಾರ ನಡೆದಿದ್ದು, ಮದುವೆಯಾಗುವುದಾಗಿ ನಂಬಿಸಿ ಆತ ಹಣ ಪಡೆದು ವಂಚಿಸಿದ್ದಾನೆ. ಅಷ್ಟೇ ಅಲ್ಲ, ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯವನ್ನು ಕೂಡಾ ನಡೆಸಲಾಗಿದೆ. ಇದೀಗ ಮದುವೆಯಾಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾಳೆ.

ನನಗೆ ಪ್ರಾಣ ಬೆದರಿಕೆ ಇದ್ದು, ನಾನು೮ ಅಪಾಯದಲ್ಲಿದ್ದೇನೆ. ನನ್ನನ್ನು ಕಾಪಾಡಿ ಎಂದು ಯುವತಿ ಟ್ವೀಟ್‌ ಮೂಲಕ ಅಂಗಲಾಚಿದ್ದಾಳೆ. ಕಾಶ್ಮೀರ ಪೊಲೀಸರ ನೆರವನ್ನೂ ಆಕೆ ಕೋರಿದ್ದಾಳೆ.

 

Share Post