CrimeDistrictsHealth

ನಿದ್ದೆ ಮಂಪರಿನಲ್ಲಿ ಡಿವೈಡರ್‌ ಹತ್ತಿಸಿ ಲಾರಿಗೆ ಡಿಕ್ಕಿ; ಮೃತರೆಲ್ಲಾ ಹೊಸಕೋಟೆಯವರು!

ಹಾಸನ; ಹಾಸನದ ಬಳಿ ಮುಂಜಾನೆ ನಡೆದ ಅಪಘಾತಕ್ಕೆ ಕಾರಿನ ಚಾಲಕನೇ ಕಾರಣ ಅನ್ನೋದು ಗೊತ್ತಾಗಿದೆ.. ಇನ್ನು ಮೃತರ ಗುರುತು ಪತ್ತೆಯಾಗಿದ್ದು, ಮೃತರೆಲ್ಲರೂ ಹೊಸಕೋಟೆ ತಾಲ್ಲೂಕಿನ ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿಯವರು ಎಂದು ತಿಳಿದುಬಂದಿದೆ..

ಕಾರಿನ ಚಾಲಕನ ನಿದ್ದೆ ಮಂಪರಿನಲ್ಲಿದ್ದ.. ಹೀಗಾಗಿ, ಕಾರು ನಿಯಂತ್ರಣ ತಪ್ಪಿ ಡಿವೈಡರ್‌ ಗುದ್ದಿ ನಂತರ ಆ ಕಡೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.. ಎರಡೂ ವಾಹನಗಳ ವೇಗದಲ್ಲಿ ಇದ್ದುದ್ದರಿಂದ ಈ ದುರ್ಘಟನೆ ನಡೆದಿದೆ.. ಆರು ಮಂದಿಯ ಮೃತದೇಹಗಳು ಕಾರಿನಲ್ಲಿ ಸಿಲುಕಿ ಛಿದ್ರ ಛಿದ್ರವಾಗಿದೆ..

ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ (ಬಾಲಕ) ಹಾಗೂ ರಾಕೇಶ್ (ಡ್ರೈವರ್) ಸಾವನ್ನಪ್ಪಿದವರು ಎಂದು ತಿಳಿದುಬಂದಿದೆ.. ಮೃತರೆಲ್ಲರೂ ಹೊಸಕೋಟೆ ತಾಲ್ಲೂಕಿನ ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು ಎಂದು ಗೊತ್ತಾಗಿದೆ..

ಪೊಲಿಸರು ಮತ್ತು ಜೆಸಿಬಿ ಸಹಾಯದ ಮೂಲಕ ಕಾರಿನಲ್ಲಿದ್ದ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.. ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳನ್ನಿಡಲಾಗಿದೆ..

 

Share Post