CrimeDistricts

ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ; ಸಾರ್ವಜನಿಕರ ಧರ್ಮದೇಟಿಗೆ ಪ್ರಾಣವೇ ಹೋಯ್ತು!

ಬೀದರ್; ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದು, ಸಾರ್ವಜನಿಕರು ನೀಡಿ ಧರ್ಮದೇಟಿಗೆ ಕಳ್ಳ ಸಾವನ್ನಪ್ಪಿದ್ದಾನೆ.. ಬೀದರ್‌ನ ಪ್ರತಾಪ ನಗರದಲ್ಲಿ ಈ ಘಟನೆ ನಡೆದಿದ್ದು, ಹಳೆ ನೌಬಾದ್ ನಿವಾಸಿ ಸಂತೋಷ ನಾಗೂರ (30) ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ..

ಪ್ರತಾಪನಗರದಲ್ಲಿ ಕಳ್ಳತನಕ್ಕೆ ನಾಲ್ವರು ಕಳ್ಳರು ಬಂದಿದ್ದರು.. ಇದರಲ್ಲಿ ಸಂತೋಷ್‌ ಮಾತ್ರ ಸಾರ್ವಜನಿಕರಿಗೆ ಸಿಕ್ಕಿಬಿದ್ದು, ಸಾವನ್ನಪ್ಪಿದ್ದಾನೆ.. ಉಳಿದ ಮೂವರು ಕಳ್ಳರಾದ ಸತೀಶ್, ಅಬ್ರಾಹಿಂ, ಅಂಬರೀಶ್ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.. ಸಂತೋಷ್‌ ಕೈಗೆ ಸಿಗುತ್ತಿದ್ದಂತೆ ಸಾರ್ವಜನಿಕರು ಕಟ್ಟಿಗೆಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ.. ಇದರಿಂದಾಗಿ ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಆದ್ರೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ..

ಮಗನ ಮೇಲೆ ಹಲ್ಲೆ ಮಾಡಿ ಕೊಲ್ಲಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತ ಸಂತೋಷ್‌ ತಾಯಿ ಪೊಲೀಸರನ್ನು ಆಗ್ರಹಿಸಿದ್ದಾರೆ.. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ..

 

Share Post