CrimeNational

ಕಾಲುವೆಗೆ ಬಿದ್ದ ಕಾರು: ನೀರಿನಲ್ಲಿ ಮುಳುಗಿ ಇಬ್ಬರು ಸಾವು

ತೆಲಂಗಾಣ: ಕಾರು ಕಾಲುವೆಗೆ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ನಡೆದಿದೆ. ರೇವಂತ್‌, ಪ್ರಸಾದ್‌ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿಗಳು. ನಿನ್ನೆ ರಾತ್ರಿ ಕಾರಿನಲ್ಲಿ ವೆಲ್ಲುಲ್ಲಿಗೆ ಪ್ರಯಾಣಿಸುತ್ತಿರುವಾಗ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾಕತೀಯ ಕಾಲುವೆಗೆ ಕಾರು ಉರುಳಿಬಿದ್ದಿದೆ. ಆ ಸಮಯಕ್ಕೆ ಕಾಲುವೆಯಲ್ಲಿ ೧೪ ಫೀಟ್‌ ನೀರು ಹರಿಯುತ್ತಿದ್ದುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ನಿನ್ನೆ ಸಂಜೆ ನಡೆದುಹೋಗುವಾಗ ಕಾಲುವೆಯಲ್ಲಿ ಏನೋ ಅಸ್ಪಷ್ಟವಾದ ವಾಹನದ ಚಹರೆ ಸ್ಥಳೀಯರ ಕಣ್ಣಿಗೆ ಬಿದ್ದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಮೇಟ್‌ ಹಳ್ಲಿ ಎಂಟ್ರಿಯಲ್ಲಿ ಕಾರು ಸಾಗುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಆದ್ರೆ ಗ್ರಾಮದೊಳಗಡೆ ಕಾರು ಹಾದುಹೋಗದೆ ಇರುವುದನ್ನು ಗಮನಿಸಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಕಾರಿನ ಮಿರರ್‌ ಕೆಳಗೆ ಬಿದ್ದಿರುವುದನ್ನು ಗಮನಿಸಿದ ಪೊಲೀಸರು ಕಾಲುವೆಗೆ ಕಾರು ಬಿದ್ದಿರರುವುದನ್ನು ದೃಢಪಡಿಸಿಕೊಂಡಿದ್ದಾರೆ. ಕೂಡಲೇ ಕ್ರೇನ್‌ ತರಿಸಿ ಕಾರನ್ನು ಮೇಲಕ್ಕೆ ಎತ್ತಿದ್ದಾರೆ ಆದರೆ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆಯೇ ರೇವಂತ್‌ ಹಾಗೂ ಪ್ರಸಾದ್‌ ಫೋನ್‌ ಕೆಲಸ ಮಾಡುತ್ತಿಲ್ಲವೆಂದು ಗಾಬರಿಯಿಂದ ಕುಟುಂಬಸ್ತರು ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದರಂತೆ. ದೂರಿನ ಅನ್ವಯ ಕಾರಿನ ಪ್ರಮಾದವನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಮೃತದೇಹಗಳನ್ನು ಪೋಸ್ಟ್ ಮಾರ್ಟಂ ಮಾಡಲು ಸ್ಥಳೀಯ ಆಸ್ಪತ್ರೆಗೆ ಕಳುಹಿಸಿದ್ದಾರೆ.

Share Post