CrimeNational

ಸಾಕಿದ್ದ ಮೀನು ಸಾವನ್ನಪ್ಪಿದ್ದಕ್ಕೆ ಮನನೊಂದು ಬಾಲಕ ಆತ್ಮಹತ್ಯೆ

ತಿರುವನಂತಪುರಂ; ಮನೆಯ ಅಕ್ವೇರಿಯಂನಲ್ಲಿ ಪ್ರೀತಿಯಿಂದ ಸಾಕಿದ್ದ ಮೀನೊಂದು ಸಾವನ್ನಪ್ಪಿದ್ದರಿಂದ ಬೇಸರಗೊಂಡಿದ್ದ 13 ವರ್ಷ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಮಲಪ್ಪುರಂ ಜಿಲ್ಲೆಯ ಪೊನ್ನಾಯಿಯ ಚಂಗರಂಕುಲಂನಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿ ರೋಷನ್‌ ಮನೆನ್‌ ಆತ್ಮಹತ್ಯೆ ಮಾಡಿಕೊಂಡ ಬಾಲಕ.

ರೋಷನ್‌ ಮೆನನ್‌ಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ಮನೆಯಲ್ಲಿ ಅಕ್ವೇರಿಯಂ ಇಡಲಾಗಿತ್ತು. ಇದರಲ್ಲಿ ರೋಷನ್‌ ಮೀನುಗಳನ್ನು ಸಾಕಿದ್ದ. ಅದರಲ್ಲಿ ಒಂದನ್ನು ತುಂಬಾ ಪ್ರೀತಿಸುತ್ತಿದ್ದ. ಆದ್ರೆ ಆ ಮೀನು ಸಾವನ್ನಪ್ಪಿದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದ ರೋಷನ್‌, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೀನು ಸಾವನ್ನಪ್ಪಿದ ಮಾರನೇ ದಿನ ಪಾರಿವಾಳಗಳಿಗೆ ಊಟ ಹಾಕಲು ಹೊರಗೆ ಬಂದಿದ್ದ. ಆದ್ರೆ ಒಂದು ಗಂಟೆಯಾದರೂ ಮನೆಗೆ ವಾಪಸ್ಸಾಗಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದಾಗ, ಮನೆಯ ಟೆರೇಸ್‌ನಲ್ಲಿ ರೋಷನ್‌ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.

Share Post