BengaluruCrime

ಬಿಟ್‌ ಕಾಯಿನ್‌ ಕೇಸ್‌ನಲ್ಲಿ ಶ್ರೀಕೃಷ್ಣ ಸಹೋದರನಿಗೆ ಸಂಕಷ್ಟ

ಬೆಂಗಳೂರು: ಬಿಟ್‌ ಕಾಯಿನ್‌ ಕೇಸ್‌ಗೆ ಸಂಬಂಧಿಸಿದಂತೆ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸಹೋದರನಿಗೆ ಸಂಕಷ್ಟ ಬಂದೊದಗಿದೆ. ಸಹೋದರ ಸುದರ್ಶನ್‌ ರಿಟ್‌ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದೆ. ನೆದರ್ಲೆಂಡ್‌ನಲ್ಲಿ ಮೆಕ್ಯಾನಿಕಲ್‌ ಇಂಜಿನಿಯರ್‌ ಆಗಿ ಕೆಲಸ ಮಾಡ್ತಿರುವ ಸುದರ್ಶನ್‌ ತನ್ನ ತಂದೆಯ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಇಡಿ ಅವರಿಗೆ ನೊಟೀಸ್‌ ನೀಡಿದೆ. ಮರಳಿ ನೆದರ್ಲೆಂಡ್‌ಗೆ ತೆರಳದಂತೆ ಇಡಿ ಅಧಿಕಾರಿಗಳು ಅಡ್ಡಿಯುಂಟುಮಾಡಿದ್ದಾರೆ.

ಲುಕ್‌ ಔಟ್‌ ಸರ್ಕ್ಯುಲರ್‌ ಹರಡಿಸಿರುವ ಆರೋಪ ಹಿನ್ನೆಲೆ ದಾಖಲೆ ಸಮೇತ ಕೋರ್ಟ್‌ಗೆ ಹಾಜರಾಗುವಂತೆ ಇಡಿ ಹಾಗೂ ಕೇಂದ್ರ ಸರ್ಕಾರದ ವಕೀಲರಿಗೆ ಹೈಕೋರ್ಟ್‌ ಸೂಚಿಸಿದೆ. ಇತ್ತ ಫೆಬ್ರವರಿ 12ರೊಳಗೆ ಕೆಲಸಕೆ ಹಾಜರಾಗುವಂತೆ ಕಂಪನಿ ಸುದರ್ಶನ್‌ಗೆ ಗಡುವು ನೀಡಿದೆ. ತನಗೆ ನೀಡಿರುವ ಗಡುವನ್ನು ವಿಸ್ತರಣೆ ಮಾಡಿ ಎಂದು ಮನವಿ ಮಾಡಿಕೊಳ್ಳುವಂತೆ ಹೈಕೋರ್ಟ್‌ ಸಲಹೆ ನೀಡಿದೆ. ಪ್ರಸ್ತುತ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿಕೆ ಮಾಡಿದೆ.

Share Post